Advertisement

ಸೋಲಿನ ಭೀತಿಯಿಂದ ಎಸ್‌.ಎಂ.ಕೃಷ್ಣರನ್ನು ಕರೆತಂದ ಬಿಜೆಪಿ: ಉಗ್ರಪ್ಪಟೀಕೆ

12:49 PM Apr 05, 2017 | Team Udayavani |

ಮೈಸೂರು: ಉಪ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಬಿಜೆಪಿ ಮುಖಂಡರು, ಎರಡೂ ಕ್ಷೇತ್ರಗಳ ಚುನಾ ವಣಾ ಪ್ರಚಾರಕ್ಕೆ ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಕರೆತಂದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಟೀಕಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಈಗಾಗಲೇ ಬಿ.ಎಸ್‌. ಯಡಿಯೂರಪ್ಪ, ಈಶ್ವರಪ್ಪ, ಡಿ.ವಿ. ಸದಾನಂದಗೌಡ ಸೇರಿ ದಂತೆ ಅನೇಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ಇದರಿಂದ ಹತಾಶರಾಗಿರುವ ಬಿಜೆಪಿ ನಾಯಕರು ಪ್ರಚಾರಕ್ಕೆ ಎಸ್‌.ಎಂ.ಕೃಷ್ಣ ಅವರನ್ನು ಕರೆತಂದಿದ್ದಾರೆ ಎಂದರು.

ಇನ್ನು ನ್ಯಾಯಯುತವಾಗಿ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರಿತಿರುವ ಬಿಜೆಪಿ ನಾಯಕರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೇವರ ಹೆಸರನ್ನು ಬಳಸು ತ್ತಿದ್ದಾರೆ. ಅಲ್ಲದೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿ.ಎಸ್‌. ಯಡಿಯೂರಪ್ಪ ವಾಹನ ತಪಾಸಣೆ ಸಂದರ್ಭದಲ್ಲಿ ಕಾರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೇ ಹೋಗಿ ರುವುದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಕಾರಿನಲ್ಲಿ ಏನಿತ್ತು ಎಂಬುದು ತಿಳಿಯ ಬೇಕಿದೆ ಎಂದು ಹೇಳಿದರು.

ಈಗ ಎಸ್‌.ಎಂ. ಕೃಷ್ಣ ಅವರು ನೀಡುತ್ತಿರುವ ಹೇಳಿಕೆಗಳು, ಭಾಷಣಗಳು ಎಲ್ಲವೂ ಬಿಜೆಪಿಯವರ ಬಾಯಿಂದ ಬಂದ ಹೇಳಿಕೆಗಳಾಗಿದೆ. ನಾಲ್ಕೂವರೆ ವರ್ಷ ಸಿಎಂ ಆಗಿದ್ದಾಗ ಕೃಷ್ಣ ಅವರು ಮಾಡಿದ ಸಾಧನೆ ಏನೆಂಬುದನ್ನು ತಿಳಿಸಲಿ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಜನರ ಬದುಕಿಗೆ ಬೇಕಾದ ಆಹಾರ, ಮನೆ, ಆರೋಗ್ಯ ನೀಡುತ್ತಿದ್ದಾರೆ.

ಪಕ್ಷದಲ್ಲಿದ್ದಾಗ ಸುಮ್ಮನಿದ್ದ ಕೃಷ್ಣ ಮತ್ತು ಶ್ರೀನಿವಾಸ ಪ್ರಸಾದ್‌ ಇದೀಗ ಟೀಕೆ ಮಾಡುತ್ತಿದ್ದು, ಈ ಹಿಂದೆ ಏಕೆ ಮೌನವಾಗಿದ್ದರು. ಹೀಗಾಗಿ ಕಾಂಗ್ರೆಸ್‌ ಬಗ್ಗೆ ಟೀಕಿಸುವುದು ಎಸ್‌.ಎಂ.ಕೃಷ್ಣ ಅವರಿಗೆ ಶೋಭೆ ತರುವುದಿಲ್ಲ, ಪಕ್ಷ ಬಿಟ್ಟ ಮೇಲೆ ಇನ್ನೊಬ್ಬರ ಖುಷಿಗಾಗಿ ಟೀಕೆ ಮಾಡುತ್ತಿರುವುದು ಕೇವಲ ರಾಜಕೀಯ ಪ್ರೇರಿತ ಎಂದು ದೂರಿದರು.

Advertisement

ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಎಂ. ರೇವಣ್ಣ ಮಾತನಾಡಿ, ಎಸ್‌.ಎಂ. ಕೃಷ್ಣ ಅವರು ಪ್ರಧಾನಿ ಹಾಗೂ ರಾಷ್ಟ್ರಪತಿ ಸ್ಥಾನಗಳೆರಡನ್ನು ಬಿಟ್ಟು ಉಳಿದ ಎಲ್ಲಾ ಸ್ಥಾನಮಾನಗಳನ್ನೂ ಕಾಂಗ್ರೆಸ್‌ನಲ್ಲಿ ಅನುಭವಿಸಿದ್ದಾರೆ. ಆದರೆ ಅವರು ಸಾಮಾಜಿಕ ನ್ಯಾಯ, ಬಡತನ ನಿವಾರಣೆ, ರೈತರಿಗೆ ನೀಡಿದ ಕೊಡುಗೆಯಾದರೂ ಏನು?. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರವನ್ನು ದೂರದೃಷ್ಟಿ ಇಲ್ಲದ ಸರ್ಕಾರ ಎಂದು ಕರೆಯಲು ಎಸ್‌.ಎಂ.ಕೃಷ್ಣ ಅವರಿಗೆ ನೈತಿಕತೆ ಇಲ್ಲ ಎಂದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇದು ಅತ್ಯಂತ ಕೆಟ್ಟ ಸರ್ಕಾರ ಎಂದು ಎಸ್‌.ಎಂ.ಕೃಷ್ಣ ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರವನ್ನು ಗಣಿದಣಿಗಳು ನಡೆಸುತ್ತಿದ್ದ ಸಂದರ್ಭ, ಭ್ರಷ್ಟಾಚಾರ ಪ್ರಕರಣದಿಂದ ಅನೇಕ ಸಚಿವರು ಹೊರ ಬಂದು, ಆ ಸರ್ಕಾರದಲ್ಲಿದ್ದ ಬಹುತೇಕ ಎಲ್ಲರೂ ಭ್ರಷ್ಟರಾಗಿದ್ದರಿಂದ ಜನರು ಅವರನ್ನು ದೂರ ಇಟ್ಟಿದ್ದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next