Advertisement

ಹಿಂದೂಗಳಿಗೆ ಜ್ಞಾನವಾಪಿ ಒಪ್ಪಿಸಿ: VHP

12:53 AM Jan 28, 2024 | Team Udayavani |

ಹೊಸದಿಲ್ಲಿ: ವಾರಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇಗುಲವನ್ನು ಧ್ವಂಸಗೊಳಿಸಿ, ನಿರ್ಮಿಸಲಾಗಿದೆ ಎಂಬುದು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಸರ್ವೇ ವರದಿಯಿಂದ ಬಹಿರಂಗವಾಗಿದೆ. ಹೀಗಾಗಿ ಈ ಸ್ಥಳವನ್ನು ಹಿಂದೂ ಸಮುದಾಯಕ್ಕೆ ಒಪ್ಪಿಸಬೇಕು ಎಂದು ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಆಗ್ರಹಿಸಿದ್ದಾರೆ.

Advertisement

ವಿವಾದಿತ ವಾಜೂಕಾನ ಪ್ರದೇಶದಲ್ಲಿ ದೊರೆತಿರುವ ಶಿವಲಿಂಗಕ್ಕೆ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ನೀಡಬೇಕು. ಇಂತೆಜಾಮಿಯಾ ಮಸೀದಿ ಸಮಿತಿಯು ಸತ್ಯವನ್ನು ಒಪ್ಪಿಕೊಂಡು, ಜ್ಞಾನವಾಪಿ ಮಸೀದಿಯನ್ನು ಬೇರೆ ಸೂಕ್ತ ಸ್ಥಳಕ್ಕೆ ಗೌರವಯುತವಾಗಿ ಸ್ಥಳಾಂತರಿಸಲು ಒಪ್ಪಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next