Advertisement

Entha Kathe Maraya: ಓಟಿಟಿಯಲ್ಲಿ ಎಂಥಾ ಕಥೆ ಮಾರಾಯ

03:08 PM May 14, 2024 | Team Udayavani |

ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನದ ‘ಎಂಥಾ ಕಥೆ ಮಾರಾಯ’ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದೆ.

Advertisement

ಚೆನ್ನೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರ ಬೆಂಗಳೂರಿನ ಪ್ರಸಕ್ತ ನೀರಿನ ಸಮಸ್ಯೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಬೆಳಕು ಚೆಲ್ಲಿದೆ. ನಿರ್ದೇಶಕರಾದ ರಕ್ಷಿತ್‌ ತೀರ್ಥಹಳ್ಳಿಯವರೇ ಬರೆದ ಕಾಡಿನ ನೆಂಟರು ಕಥಾಸಂಕಲನ ಆಧಾರಿತ ಚಿತ್ರದಲ್ಲಿ ಸುಧೀರ್‌ ಎಸ್‌. ಜೆ, ವೇದಾಂತ್‌ ಸುಬ್ರಮಣ್ಯ, ಶ್ರೀಪ್ರಿಯ, ಅಶ್ವಿ‌ನ್‌ ಹಾಸನ್‌, ಕರಿಸುಬ್ಬು, ಕೇಶವ್‌ ಗುತ್ತಳಿಕೆ ಮುಂತಾ ದವರು ನಟಿಸಿದ್ದಾರೆ.

ಏರ್ಟೆಲ್ ಎಕ್ಸ್ಟ್ರೀಮ್, ಹಂಗಾಮ ಪ್ಲೇ, ಓಟಿಟಿ ಪ್ಲೇ ಮುಂತಾದ ಒಟಿಟಿಗಳಲ್ಲಿ ಪ್ರಸಾರವಾಗಿ ವೀಕ್ಷಕರ ಗಮನ ಸೆಳೆದಿದೆ.

ಗುರುಪ್ರಸಾದ್‌ ನರ್ನಾಡ್‌ ಛಾಯಾಗ್ರಹಣ, ಹೇಮಂತ್‌ ಜೋಯಿಸ್‌ ಸಂಗೀತ ಮತ್ತು ಸುಧೀರ್ ಎಸ್‌ ಜೆ ಸಂಕಲನ ಚಿತ್ರಕ್ಕಿದೆ. ಸಂಚಲನ ಮೂವೀಸ್‌ ಬ್ಯಾನರ್‌ ಅಡಿಯಲ್ಲಿ ರಾಮಕೃಷ್ಣ ನಿಗಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next