Advertisement

ಸಂಭ್ರಮದ ಎಳ್ಳ ಅಮಾವಾಸ್ಯೆ

02:43 PM Jan 04, 2022 | Team Udayavani |

ಯಾದಗಿರಿ: ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಅಡುಗೆ ಮಾಡಿಕೊಂಡು ಹೊಲಗಳಿಗೆ ಹೋಗಿ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಎಳ್ಳು ಅಮಾವಾಸ್ಯೆ ಹಬ್ಬ ಆಚರಣೆ ಮಾಡುತ್ತಾರೆ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಹೇಳಿದರು.

Advertisement

ಎಳ್ಳ ಅಮಾವಾಸ್ಯೆ ಹಬ್ಬದ ನಿಮಿತ್ತ ತಾಲೂಕಿನ ಮುದ್ನಾಳ ಗ್ರಾಮದ ಚಂದಮ್ಮ ಹನುಮಂತಪ್ಪ ಅವರ ಹೊಲದಲ್ಲಿ ಪೂಜೆ ಸಲ್ಲಿಸಿ ರೈತರಿಗೆ ಸನ್ಮಾನಿಸಿ ಮಾತನಾಡಿದ ಅವರು, ಮನೆಯವರೆಲ್ಲರೂ ಸೇರಿ ಹೊಲದಲ್ಲೇ ಎಳ್ಳು, ಶೇಂಗಾ ಹೋಳಿಗೆ, ತುಪ್ಪ ಸೇರಿ ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ಬೆಳೆಗಳನ್ನು ಒಂದೆಡೆ ಜೋಡಿಸಿ ಕಲ್ಲುಗಳಿಂದ ಪಾಂಡವರನ್ನು ನಿರ್ಮಿಸಿ ಚೆರಗ ಚೆಲ್ಲಿ ಬೆಳೆ ಉತ್ತಮವಾಗಿ ಬರಲಿ ಎಂದು ಭೂಮಿತಾಯಿಗೆ ಈ ಅವಧಿಯಲ್ಲಿ ಪೂಜೆ ಸಲ್ಲಿಸುವುದು ನಮ್ಮ ಹಿರಿಯರು ರೂಢಿಸಿಕೊಂಡ ಬಂದ ಪದ್ಧತಿಯಾಗಿದೆ ಎಂದು ಹೇಳಿದರು.

ರವಿ, ದೇವಪ್ಪ, ಸುರೇಶ, ಅರ್ಪಿತಾ, ಮಹಾದೇವಿ, ದೇವಮ್ಮ, ಸುನಂದ, ಅವಿನಾಶ, ಅನುಪಮ, ಪವನ, ವಿಶಾಲ, ಮಲ್ಲಪ್ಪ, ಭೀಮು, ಶಿವು ಮತ್ತಿತರರಿದ್ದರು,

Advertisement

Udayavani is now on Telegram. Click here to join our channel and stay updated with the latest news.

Next