Advertisement

ವಿದ್ಯುತ್‌ ಅವಘಡ: ಇಬ್ಬರು ಸಾವು

10:55 PM Jul 02, 2019 | Lakshmi GovindaRaj |

ಚಿಕ್ಕಜಾಜೂರು/ಭಟ್ಕಳ: ಪ್ರತ್ಯೇಕ ವಿದ್ಯುತ್‌ ಅವಘಡದಲ್ಲಿ ಬಾಲಕಿ ಸೇರಿದಂತೆ ಇಬ್ಬರು ಸಾವನ್ನಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರು ಸಮೀಪದ ಶೃಂಗೇರಿ ಹನುಮನಹಳ್ಳಿ ಗೊಲ್ಲರಹಟ್ಟಿಯ ರಂಗಮ್ಮ (45) ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾರೆ.

Advertisement

ದನಗಳಿಗೆ ಹುಲ್ಲು ತರಲೆಂದು ಮಂಗಳವಾರ ಬೆಳಗ್ಗೆ 7:45ರ ಸುಮಾರಿಗೆ ಸಮೀಪದ ತೋಟಕ್ಕೆ ಹೋಗಿದ್ದರು. ವಿದ್ಯುತ್‌ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ಕಾಣದೇ ತುಳಿದು, ವಿದ್ಯುತ್‌ ಶಾಕ್‌ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಟ್ಕಳ ನಗರಕ್ಕೆ ಹೊಂದಿಕೊಂಡಿರುವ ಹುರುಳಿಸಾಲ್‌ನಲ್ಲಿ ವಿದ್ಯುತ್‌ ಸ್ಪರ್ಶದಿಂದ ಖುಷಿ ಈಶ್ವರ ನಾಯ್ಕ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಈಕೆ 1ನೇ ತರಗತಿಯಲ್ಲಿ ಓದುತ್ತಿದ್ದು , ಸಂಜೆ ಪಕ್ಕದ ಮನೆ ಹತ್ತಿರದ ಐಬೆಕ್ಸ್‌ ಬೇಲಿ ದಾಟಲು ಗಟಾರಕ್ಕೆ ಇಳಿದಿದ್ದು ಗಟಾರದಲ್ಲಿ ನೀರಿರುವ ಕಾರಣ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next