Advertisement

Election: ಉಪೇಂದ್ರ ಯಾವಾಗ ಗೆಲ್ಲುವುದು….?: ಉತ್ತರ ನೀಡಿದ ರಿಯಲ್ ಸ್ಟಾರ್

10:44 AM Jun 07, 2024 | Team Udayavani |

ಆಂಧ್ರದಲ್ಲಿ ನಟ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಕ್ಷ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಇತ್ತ ಸೋಶಿಯಲ್‌ ಮೀಡಿಯಾದಲ್ಲಿ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಕುರಿತು ಚರ್ಚೆ ಆರಂಭವಾಗಿದೆ. “ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್‌ವೊಂದು ಓಡಾಡುತ್ತಿದೆ. ಈ ಪೋಸ್ಟ್‌ಗೆ ಸ್ವತಃ ಉಪೇಂದ್ರ ಉತ್ತರಿಸಿದ್ದಾರೆ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪತ್ರವನ್ನೇ ಉಪೇಂದ್ರ ಬರೆದಿದ್ದು, ಅದು ವೈರಲ್‌ ಆಗಿದೆ.

Advertisement

“ವಾಹ್‌ ಮೈ ಡಿಯರ್‌ ಪ್ರಜಾಪ್ರಭುಗಳೇ ವಾಹ್‌.. ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂಥಾ ನಿಸ್ವಾರ್ಥ! ಎಂಥಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್‌ ಬಿದ್ದೆ. ಡೋಂಟ್‌ ವರೀ. ನಾನ್‌ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್‌ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್‌ ಗೆಲ್ಲೋದ್‌ ಯಾವಾಗ ಅಂತ ನೀವ್‌ ಯೋಚನೆ ಮಾಡ್ರಪ್ಪೋ’.ನೆಕ್ಸ್ಟ್ ಎಲೆಕ್ಷನ್‌ನಲ್ಲಿ ನನಗ್‌ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ ನೀವ್‌ ಎಮೋಸನಲ್‌ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡ್ರಿ. ಕಷ್ಟ ಪಡ್ರಿ. ಆಮೇಲೆ ಐದು ವರ್ಷ ನೀವೇನ್‌ ಬೇಕಾದ್ರೂ ಮಾಡ್ಕಳಿ ನಾವ್‌ ಕೇಳಕ್‌ ಬರಲ್ಲ ಅಂದ್ರೆ… ಉಸ್‌.. ಏನ್‌ ಬರೀಬೇಕೋ ಗೊತ್ತಾಗ್ತಿಲ್ಲರಪ್ಪೋ… ಈ ದಡ್‌ ನನ್‌ ಮಗಂಗೇ ಯಾವೋನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲ’ ಎಂದು ಉಪೇಂದ್ರ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಕಾಮೆಂಟ್ಸ್‌ ಬರುತ್ತಿವೆ.

ಸದ್ಯ ಉಪೇಂದ್ರ ಅವರದ್ದೇ ನಿರ್ದೇಶನ, ನಟನೆಯ “ಯು-ಐ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next