Advertisement

ಎಂಟು ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

08:17 PM Jan 29, 2021 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ಎಂಟು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಶಾಂತಿಯುತವಾಗಿ ಚುನಾವಣೆ ನಡೆಯಿತು. ಕಸಬಾ ಹೋಬಳಿ ನಲ್ಲೂರು ಗ್ರಾಪಂ ಅಧ್ಯಕ್ಷೆಯಾಗಿ ಗಿಡ್ಡಮ್ಮ, ಉಪಾಧ್ಯಕ್ಷರಾಗಿ ತಿಮ್ಮೇಗೌಡ, ನುಗ್ಗೇಹಳ್ಳಿ ಹೋಬಳಿ ಬೆಳಗೀಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಂಜೇಗೌಡ, ಉಪಾಧ್ಯಕ್ಷೆಯಾಗಿ ಪ್ರೇಮಕುಮಾರಿ, ದಂಡಿಗನಹಳ್ಳಿ ಹೋಬಳಿ ಸಾತೇನಹಳ್ಳಿ ಗ್ರಾಪಂಗೆ ಎಚ್‌.ಎಸ್‌.ಭಾರತಿ ಅಧ್ಯಕ್ಷರಾದರೆ, ಎಚ್‌.ಪಿ.ಪಲ್ಲವಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

Advertisement

ಇದನ್ನೂ ಓದಿ:30 ವರ್ಷದಿಂದ ಪಾಳು ಬಿದ್ದ ಕ್ವಾಟ್ರಸ್‌ ತೆರವುಗೊಳಿಸಿ

ಶ್ರವಣಬೆಳಗೊಳ ಹೋಬಳಿ ಜುಟ್ಟನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನಿಖೀಲ್‌ಗೌಡ, ಉಪಾಧ್ಯಕ್ಷೆಯಾಗಿ ಎಚ್‌.ಎನ್‌.ಪುಷ್ಪಲತಾ, ದಮ್ಮನಿಂಗಲ ಗ್ರಾಪಂಗೆ ಅಧ್ಯಕ್ಷೆಯಾಗಿ ಎಂ.ಬಿ.ಭವ್ಯಾ, ಉಪಾಧ್ಯಕ್ಷರಾಗಿ ಕೆ.ಆರ್‌. ಅನಂತಾ, ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಪಂಗೆ ಕೆ.ಜೆ.ಶಿವನಂಜೇಗೌಡ ಅಧ್ಯಕ್ಷ, ಉಪಾಧ್ಯಕ್ಷೆಯಾಗಿ ರತ್ನ ಆಯ್ಕೆಯಾದರು. ಜಿನ್ನೇನಹಳ್ಳಿ ಗ್ರಾಪಂಗೆ ಅಧ್ಯಕ್ಷರಾಗಿ ಜೆ. ಎಸ್‌.ಮಂಜುನಾಥ್‌, ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಆಯ್ಕೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next