Advertisement

ಶಿಕ್ಷಣ ಸಂಸ್ಕಾರದೊಂದಿಗೆ ದೇಶಪ್ರೇಮಿ, ಸತ್ಪ್ರಜೆಗಳಾಗಿ

09:10 AM Apr 13, 2018 | Karthik A |

ಕುಂಬಳೆ: ಉತ್ತಮ ಶಿಕ್ಷಣ ಸಂಸ್ಕಾರ ಮತ್ತು ದೇಶಪ್ರೇಮದೊಂದಿಗೆ ವಿದ್ಯಾರ್ಥಿಗಳು ಮುಂದಿನ ಸತ್ಪ್ರಜೆಗಳಾಗಬೇಕು. ವಿಶ್ವವಿದ್ಯಾಲಯಗಳ ಸದುಪಯೋಗದ ಮೂಲಕ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಸುಪ್ತ ಪ್ರತಿಭೆಯನ್ನು ಪ್ರಕಟಿಸಬೇಕೆಂಬುದಾಗಿ ಕೇಂದ್ರ ಪ್ರವಾಸೋದ್ಯಮ ಸಹಾಯಕ ಸಚಿವ ಅಲ್ಫಾನ್ಸೊ ಕಣ್ಣತ್ತಾನಂ ಹೇಳಿದರು. ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯಾದಲ್ಲಿ ನೂತನವಾಗಿ ನಿರ್ಮಿಸಲಿರುವ ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡಕ್ಕೆ ಶಿಲಾನ್ಯಾಸಗೈದ ಬಳಿಕ ಜರಗಿದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

Advertisement

ವಿ.ವಿ. ಉಪಕುಲಪತಿ ಡಾ| ಜಿ. ಗೋಪಕುಮಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಿದರು. ವಿ.ವಿ.ಅಧಿಕಾರಿಗಳಾದ ಡಾ| ಜಯಪ್ರಸಾದ್‌, ಎ.ಕೆ. ದಾಸ್‌, ಜೇಸುದಾಸ್‌ ಉಪಸ್ಥಿತರಿದ್ದರು. ಕೆ.ಜಿ. ರಾಜಗೋಪಾಲ್‌ ವರದಿ ಮಂಡಿಸಿದರು.ಡಾ| ರಾಧಾಕೃಷ್ಣನ್‌ ನಾಯರ್‌ ಸ್ವಾಗತಿಸಿದರು.ಮಾಣಿಕ್ಯವೇಲು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next