Advertisement

ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ಆರಾಧನೆ

07:04 AM Sep 16, 2020 | mahesh |

ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನೆ ಮಂಗಳವಾರ ಮಠದ ಆವರಣದಲ್ಲಿ ನಡೆಯಿತು. ಮಠದ ಮುಂದಿನ ಪೀಠಾಧಿಪತಿ ಯಾಗಲಿರುವ ಸಚ್ಚಿದಾನಂದ ಭಾರತೀ ಶ್ರೀಗಳು ನೇತೃತ್ವ ವಹಿಸಿದ್ದರು. ಬೆಳಗ್ಗೆ ಸಂಕರ್ಷಣಾದಿ ಹವನ, ಪುರುಷ ಸೂಕ್ತ ಹವನ, ರುದ್ರ ಹವನ ಸಹಿತ ವಿಧಿವಿಧಾನಗಳು ನಡೆದವು. ಅಪರಾಹ್ನ ಶ್ರೀಗಳ ಸ್ಮರಣಾರ್ಥ ಯಕ್ಷ ಗಾನಾರ್ಚನೆ ಸಮರ್ಪಣೆಗೊಂಡಿತು.

Advertisement

ಬುಧವಾರ ಬೆಳಗ್ಗೆ ಆರಾಧನೆ, ಯತಿಪೂಜೆ, ಮಂತ್ರಾಕ್ಷತೆಗಳು ನಡೆಯ ಲಿವೆ. ಅಪರಾಹ್ನ ಶ್ರೀಗಳ ಸ್ಮರಣಾರ್ಥ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸೋಮವಾರ ಚತುರ್ವೇದ, ಭಾಗವತ, ಬ್ರಹ್ಮಸೂತ್ರಗಳ ಪಾರಾಯಣ ನೆರವೇರಿತು.

 

Advertisement

Udayavani is now on Telegram. Click here to join our channel and stay updated with the latest news.

Next