Advertisement

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

12:17 AM Oct 24, 2021 | Team Udayavani |

ಬೆಳ್ತಂಗಡಿ: ತಾಲೂಕು ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಗಿ ಹಾದು ಹೋಗುವ ಬಹುಕಾಲದ ಬೇಡಿಕೆಯ ದಿಡುಪೆ-ಎಳನೀರು-ಸಂಸೆ ರಸ್ತೆ ನಿರ್ಮಾಣಕ್ಕೆ ಸರ್ವೇ ಕಾರ್ಯ ನಡೆಯುತ್ತಿದ್ದು, ಬಹುತೇಕ ಮುಕ್ತಾಯದ ಹಂತದಲ್ಲಿದೆ.

Advertisement

ಅನೇಕ ವರ್ಷಗಳ ಹೋರಾಟದ ಫಲವಾಗಿ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯ ಪಾಲಕ ಅಭಿಯಂತರಿಗೆ ಸರ್ವೇ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದು, ವನ್ಯಜೀವಿ ಮೀಸಲು ಅರಣ್ಯಕ್ಕೊಳಪಟ್ಟಿರುವ 6 ಕಿ.ಮೀ. ಮತ್ತು ಕಂದಾಯ ಇಲಾಖೆಗೆ ಒಳಪಟ್ಟಿರುವ 9 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೇ ನಡೆಯುತ್ತಿದೆ.

ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ರಸ್ತೆ
ಬ್ರಿಟಿಷ್‌ ಸರಕಾರ 1939ರಲ್ಲಿ ನಡೆಸಿದ್ದ ಅರಣ್ಯ ಸರ್ವೇಯಂತೆ ಜನ – ಜಾನುವಾರುಗಳ ಕಾಲ್ನಡಿಗೆಗೆಂದು ಕಾಲು ದಾರಿಯನ್ನಷ್ಟೇ ಕಲ್ಪಿಸಿತ್ತು. ಅದರಂತೆ 6 ಕಿ.ಮೀ. ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಸರ್ವಋತು ಕಾಂಕ್ರೀಟ್‌ ಅಥವಾ ಡಾಮರು ರಸ್ತೆ, ಉಳಿದ 9 ಕಿ.ಮೀ.ಯಲ್ಲಿ 12 ಅಡಿ ಅಗಲದ ರಸ್ತೆ ನಿರ್ಮಿಸುವಂತೆ ಯೋಜನೆ ರೂಪಿಸಲಾಗಿದೆ.

ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.

ಇದನ್ನೂ ಓದಿ:ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

Advertisement

ಜೀವಮಾನದ ಸಂಪರ್ಕ ರಸ್ತೆ
ದಿಡುಪೆ-ಸಂಸೆ ರಸ್ತೆಯಾದಲ್ಲಿ ಪರ್ಯಾಯ ರಸ್ತೆಯ ಜತೆಗೆ ಅತೀ ಕಡಿಮೆ ಅಂದಾಜು 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶ ಕ್ರಮಿಸುವ ಅಂತರ ವಾಗಲಿದೆ. ನೂತನ ರಸ್ತೆಗೆ ಯಾವುದೇ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಕಾಂಕ್ರೀಟ್‌ ಮೋರಿಗಳಷ್ಟೇ ಸಾಕು. ರಸ್ತೆ ನಿರ್ಮಾಣ ವಾದಲ್ಲಿ ರಾಷ್ಟ್ರೀಯ ಹೆದ್ದಾರಿ-73 ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯವಾಗಲಿದೆ. ಅಷ್ಟೇ ಅಲ್ಲದೆ 500ಕ್ಕೂ ಅಧಿಕ ಜನಸಂಖ್ಯೆ ಯಿರುವ ಎಳನೀರು ಪ್ರದೇಶದ ಜನರಿಗೆ ಆರೋಗ್ಯ, ಶಿಕ್ಷಣ ಇತ್ಯಾದಿಗಾಗಿ ತಾಲೂಕು ಕೇಂದ್ರ ನಿಕಟವಾಗಲಿದೆ. ಜತೆಗೆ ಅದು ಅಲ್ಲಿನ ಜನತೆಗೆ ಜೀವಮಾನದ ಸಂಪರ್ಕ ರಸ್ತೆಯಾಗಲಿದೆ.

ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ಮುಕ್ತಾಯ ಹಂತದಲ್ಲಿದೆ. ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಿ ಸರಕಾರಕ್ಕೆ ಸಲ್ಲಿಸಲಾಗುವುದು..
– ಶಿವಪ್ರಸಾದ್‌ ಅಜಿಲ,
ಸಹಾಯಕ ಕಾರ್ಯಪಾಲಕ ಅಭಿಯಂತ,
ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next