Advertisement

ಹದಗೆಟ್ಟ ಚರಂಡಿ: ಪಾದಚಾರಿಗಳಿಗೆ ಕೊಳಕು ನೀರಿನ ಸಿಂಚನ

06:55 AM Jul 03, 2018 | |

ಉಡುಪಿ: ಉಡುಪಿ ನಗರದ ಹೆಬ್ಟಾಗಿಲು ಕಲ್ಯಾಣಪುರ ಸಂತೆಕಟ್ಟೆ ಎನ್ನುವುದು ಅಕ್ಷರಶಃ ಅವ್ಯವಸ್ಥೆಯ ಗೂಡಾಗಿದೆ. ಟ್ರಾಫಿಕ್‌ ಸಮಸ್ಯೆ ಒಂದು ಕಡೆಯಾದರೆ ಕಸದ ಸಮಸ್ಯೆ ಇನ್ನೊಂದು ಕಡೆ. ಇಲ್ಲಿನ ಜಂಕ್ಷನ್‌ನಿಂದ ಕಲ್ಯಾಣಪುರ ಮತ್ತು ಕೆಮ್ಮಣ್ಣು ಕಡೆ ತೆರಳುವ ಮಾರ್ಗದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆ ಮೇಲೆ ನೀರು ಹರಿದು ಹೋಗುತ್ತಿದೆ. 

Advertisement

ಇಲ್ಲಿನ ಸ್ಥಳೀಯ ಅಂಗಡಿ ಮಾಲಕರು ತಮ್ಮ ಅಂಗಡಿಯ ತ್ಯಾಜ್ಯಗಳನ್ನು ಚರಂಡಿಗೆ ಮತ್ತು ಮರದ ಸುತ್ತ ಹಾಕಿ ಕಸದ ತೊಟ್ಟಿಯಾಗಿ ಪರಿವರ್ತಿಸಲಾಗಿದೆ.ಇದು ಚರಂಡಿಯಲ್ಲಿ ಸಿಲುಕಿ ನೀರು ರಸ್ತೆ ಮೇಲೆ ಹರಿಯಲು ಪ್ರಮುಖ ಕಾರಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ನಡೆದಾಡುವ ಈ ರಸ್ತೆಯಲ್ಲಿ ವಾಹನಗಳು ತೆರಳುವ ಸಂದರ್ಭ ರಸ್ತೆ ಮೇಲೆ ಹರಿಯುವ ಕೊಳಕು ನೀರು ಪಾದಚಾರಿಗಳ ಮೇಲೆ ರಾಚುತ್ತದೆ.

ತತ್‌‌ಕ್ಷಣ ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next