Advertisement

ಸ್ವಂತ ಖರ್ಚಿನಿಂದ ಪೈಪ್‌ಲೈನ್‌ ವ್ಯವಸ್ಥೆ : ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಸದಸ್ಯ

12:34 PM Jan 09, 2021 | Team Udayavani |

ಕುಣಿಗಲ್‌: ಅಧಿಕಾರಿಗಳ ಅಸಹಕಾರ, ಜನರ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದನ್ನು ಸಮಸ್ಯೆ ಅರಿತ ಪುರಸಭಾ ಸದಸ್ಯ ಆನಂದ್‌ಕುಮಾರ್‌ ತಮ್ಮ ಸ್ವತಂ ಖರ್ಚಿನಲ್ಲಿ ಪೈಪ್‌ಲೈನ್‌ ಕಾಮಗಾರಿ ಮಾಡಿಸಿ ನಾಗರಿಕರ ಕುಡಿವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಪಟ್ಟಣದ 20ನೇ ವಾರ್ಡ್‌ನ ಕೆಆರ್‌ಎಸ್‌ ಆಗ್ರಹಾರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಿಂದ ಐಡಿಬಿಐ ಬ್ಯಾಂಕ್‌ ಬಿಎಂರಸ್ತೆ ವರೆಗೆ ಪೈಪ್‌ಲೈನ್‌ ಹಾಳಾಗಿ ಈ ಭಾಗದ ಜನರ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿತ್ತು. ಈ ಸಂಬಂಧ ಸ್ಥಳೀಯರು ಹಲವು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಸದಸ್ಯ ಆನಂದ್‌ಕುಮಾರ್‌ ತಮ್ಮ ಸ್ವಂತ ಹಣ 18 ಸಾವಿರ ರೂ ವಿನಿಯೋಗಿಸಿ ಪೈಪ್‌ ಲೈನ್‌ ದುರಸ್ತಿ ಕಾಮಗಾರಿ ಮಾಡಿಸಿ ಈ ಭಾಗದ ಜನರ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜನರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ಕೊಲೆ : ಪೊಲೀಸರಿಂದ ಮೂವರು ಆರೋಪಿಗಳ ಸೆರೆ

ಈ ಕುರಿತು ಆನಂದ್‌ಕುಮಾರ್‌ ಪ್ರತಿಕ್ರಿಯಿಸಿ, ಪೈಪ್‌ಲೈನ್‌ ಹಾಳಾಗಿ ಹಲವು ತಿಂಗಳು ಕಳೆದಿದೆ, ಇದರ ದುರಸ್ತಿ ಮಾಡಿ
ಸಾರ್ವಜನಿಕರ ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಪುರಸಭಾ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ತಾಳಿದ ಪರಿಣಾಮ ಜನರು ನೀರಿಗಾಗಿ ಪರದಾಡಿದರು. ಕೊನೆಗೆ ನನ್ನ ಸ್ವಂತ ಖರ್ಚಿನಿಂದ ಸುಮಾರು 120 ಅಡಿಗೂ ಅಧಿಕ ಪೈಪ್‌ ಲೈನ್‌ ಕಾಮಗಾರಿ ಮಾಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next