Advertisement

ಮಾಯಾಂಕ್‌ ಸ್ಥಾನ ತಪ್ಪಲು ದ್ರಾವಿಡ್‌ ನೀತಿ ಕಾರಣ?

06:20 AM May 11, 2018 | Team Udayavani |

ಹೊಸದಿಲ್ಲಿ: ಆಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಆಯ್ಕೆಯಾಗಿದೆ. ಅಚ್ಚರಿಯೆನ್ನುವಂತೆ ಕರ್ನಾಟಕದ ಕರುಣ್‌ ನಾಯರ್‌ ಮತ್ತೆ ಕರೆ ಪಡೆದಿದ್ದಾರೆ. ಆದರೆ ಈ ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಅತಿ ಶ್ರೇಷ್ಠ ಆಟವಾಡಿ 2 ಸಾವಿರದಷ್ಟು ರನ್‌ ಗಳಿಸಿರುವ ರಾಜ್ಯದ ಮಾಯಾಂಕ್‌ ಅಗರ್ವಾಲ್‌ ಸ್ಥಾನ ಪಡೆಯಲು ವಿಫ‌ಲರಾಗಿದ್ದಾರೆ. ಇದು ಹಲವರಿಗೆ ಅಚ್ಚರಿ ತಂದಿದೆ.

Advertisement

ಈ ಬೆಳವಣಿಗೆಗೆ ಕಾರಣ ರಾಹುಲ್‌ ದ್ರಾವಿಡ್‌ ಎನ್ನುವುದು ಹೊಸ ಸುದ್ದಿ. ದ್ರಾವಿಡ್‌ ಭಾರತದ ಅಂಡರ್‌-19 ಹಾಗೂ ಎ ತಂಡದ ತರಬೇತುದಾರ. ಎ ತಂಡದಲ್ಲಿ ಆಡಿದ ಅನಂತರವೇ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುವುದು ದ್ರಾವಿಡ್‌ ಅವರ ನಿಲುವು. ಅದನ್ನು ಬಿಸಿಸಿಐ ಒಪ್ಪಿಕೊಂಡು ಪಾಲಿಸುತ್ತಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next