Advertisement

ಬಾವಿಗಳಿಗೆ ಒಳಚರಂಡಿ ನೀರು

09:36 AM Jan 13, 2018 | Team Udayavani |

ಮಹಾನಗರ: ಕುಲಶೇಖರದ ಮೇಗಿನಮನೆ ಪ್ರದೇಶದಲ್ಲಿ ಒಳಚರಂಡಿ ನೀರು ಸೋರಿಕೆಯಾಗಿ ಸುಮಾರು 10ಕ್ಕೂ ಅಧಿಕ ಬಾವಿಗಳ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಈ ಬಗ್ಗೆ ಉದಯವಾಣಿ ಸುದಿನ ಬಾವಿಗೆ ಬರುತ್ತಿದೆ ಮೋರಿ ನೀರು ಅಧಿಕಾರಿಗಳೆಲ್ಲಿಹರು? ಶೀರ್ಷಿಕೆಯಡಿ ಲೇಖನ ಪ್ರಕಟಿಸಿತ್ತು. ಆದಾದ ಬಳಿಕ ಮೇಯರ್‌ ಕವಿತಾ ಸನಿಲ್‌ ಮತ್ತು ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

12 ಬಾವಿಗಳಿಗೆ ಡ್ರೈನೇಜ್‌ ನೀರು ಹೋಗಿ ಕಲುಷಿತಗೊಂಡಿರುವುದು ನಿಜ. ಈ ನಿಟ್ಟಿನಲ್ಲಿ ಅಮೃತ್‌ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಅಧಿಕಾರಿಗಳ ಬಳಿ ಆರ್‌ ಸಿಸಿ ಛೇಂಬರ್‌ ನಿರ್ಮಿಸಲು ಸೂಚನೆ ನೀಡಲಾಗಿದೆ. ಸಮಸ್ಯೆ ಸಂಪೂರ್ಣ ಬಗೆಹರಿಯಬೇಕಾದರೆ ಈ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರ ಸಂಪೂರ್ಣ ಸಹಕಾರ ಬೇಕಾಗುತ್ತದೆ ಎಂದರು.

ನಗರ ಯೋಜನ ಸ್ಥಾಯೀ ಸಮಿತಿ ಅಧ್ಯಕ್ಷ ರವೂಫ್‌, ಕಾರ್ಪೊರೇಟರ್‌ ಅಜೀಜ್‌ ಬೈಕಂಪಾಡಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next