Advertisement

ಪಾಣೆಮಂಗಳೂರು ಜಿನಚೈತ್ಯಾಲಯ ಡಾ|ಡಿ.ವೀರೇಂದ್ರ ಹೆಗ್ಗಡೆ ಭೇಟಿ

08:50 AM Sep 06, 2017 | Team Udayavani |

ಬಂಟ್ವಾಳ: ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಜಿನಚೆ„ತ್ಯಾಲಯದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ 108 ಮುನಿಶ್ರೀ ವೀರ ಸಾಗರ ಮಹಾರಾಜರನ್ನು ಸೆ. 5ರಂದು ಸಂಜೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿಯಾದರು.

Advertisement

ಈ ಸಂದರ್ಭ ಅನಂತ ನೋಂಪಿಯ ಶುಭ ದಿನದ ಅಂಗವಾಗಿ ದೇವರ ದರ್ಶನ ಹಾಗೂ ಮಹಾ ಮಾತೆ ಪದ್ಮಾವತಿಯ ವಿಶೇಷ ಅಲಂಕಾರದ ಲಕ್ಷಹೂವಿನ ಪೂಜೆಯನ್ನೂ ವೀಕ್ಷಿಸಿದ ಡಾ| ಹೆಗ್ಗಡೆಯವರು ಕೆಲ ಕಾಲ ಮುನಿಶ್ರೀಗಳೊಂದಿಗೆ ಏಕಾಂತದಲ್ಲಿ ಮಾತುಕತೆ ನಡೆಸಿದರು.

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ರತ್ನಾಕರ್‌ ಜೈನ್‌ ಮಂಗಳೂರು, ಸುದರ್ಶನ್‌ ಜೈನ್‌, ಜಿನರಾಜ ಆರಿಗ ಪಚ್ಚಾಜೆ, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ ಬಲ್ಲಾಳ್‌, ಪ್ರವೀಣ್‌ ಕುಮಾರ್‌, ಭರತ್‌ ರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next