Advertisement

ರಾಷ್ಟ್ರಧ್ವಜ ಇಳಿಸಿಲ್ಲ,ಗೊಂದಲ ಮೂಡಿಸಬೇಡಿ: ಸಚಿವ ಬಿ.ಸಿ.ನಾಗೇಶ್

11:07 AM Feb 09, 2022 | Team Udayavani |

ಬೆಂಗಳೂರು: ಸುಳ್ಳು ಪ್ರಚೋದನೆ ವಾಟ್ಸ್ ಆಪ್ ವಿಡಿಯೋ ಗೆ ಡಿಕೆ ಶಿವಕುಮಾರ್ ರಿಯಾಕ್ಷನ್ ಕೊಟ್ಟಿದ್ದಾರೆ, ಜನರಲ್ಲಿ ಗೊಂದಲ ಮೂಡಿಸಬೇಡಿ. ರಾಷ್ಟ್ರಧ್ವಜ ಇಳಿಸಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಅಹಿತಕರ ಘಟನೆಯ ಹಿಂದೆ ಯಾರೇ ಇದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಶಾಲೆ ಕ್ಲೋಸ್ ಮಾಡಬೇಕು ಎಂದಾಗ ಬಹಳ ಬೇಸರವಾಯಿತು. ನಿನ್ನೆ ಜ್ಞಾನದೇಗುಲದಲ್ಲಿ ಆಗಬಾರದ ಕೆಲಸ ಆಗಿದೆ. ಕೊರೊನ ಮೊದಲ ಮತ್ತು ಎರಡನೇ ಅಲೆ ಶಾಲೆ ಓಪನ್ ಇರಲಿಲ್ಲ ಎಂದರು.

ಉಡುಪಿಯಲ್ಲಿ ಶುರುವಾದ ಸಮಸ್ಯೆ ಬಗೆಹರಿಯುತ್ತಿತ್ತು. ವಿಧ್ಯಾರ್ಥಿಗಳು ಒಪ್ಪಿದ್ರೂ ಇದನ್ನ ನೋಡಿದ ಕೆಲ ರಾಜಕೀಯ ಪಕ್ಷಗಳ ನಾಯಕರು ಎಂಟ್ರಿ ಕೊಟ್ಟರು. ಮೂರನೇ ಅಲೆಯಲ್ಲಿ ಯಶಸ್ವಿಯಾಗಿ ಶಾಲೆ ಓಪನ್ ಮಾಡಿದೇವು. ನಿನ್ನೆ ಘಟನೆ ಯಲ್ಲಿ ಇದೆ ಪಿಎಫ್ಐ ಕೈವಾಡ ಇದೆ. ಸಮಸ್ಯೆ ಜೀವಂತವಾಗಿ ಇಡುವ ಕೆಲಸ ಮಾಡಿದರು ಎಂದರು.

ಇದನ್ನೂ ಓದಿ :ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಹಿಜಾಬ್ ಹಾಕಿಸುತ್ತಾರೆ: ಸಚಿವ ಸುನೀಲ್ ಕುಮಾರ್

ಗೃಹ ಇಲಾಖೆ ತನಿಖೆ ಮುಂದಾಗಿದೆ. ಈಗಾಗಲೇ ನಾನು ಮತ್ತು ಅರಗಜ್ಞಾನೇಂದ್ರ ಮಾಹಿತಿ ಕೊಟ್ಟಿದ್ದೇವೆ. ರಾಷ್ಟ್ರೀಯ ಪಕ್ಷದ ನಾಯಕರು ಸತ್ಯಾಂಶ ತಿಳಿದು ಮಾತನಾಡಬೇಕು. ನಿನ್ನೆ ಘಟನೆ ಯಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

ಇಂದು ಸಹ ಎಜಿ ಇದರ ಬಗ್ಗೆ ಕೋರ್ಟ್ ಲ್ಲಿ ವಾದ ಮಾಡುತ್ತಾರೆ. ಸರ್ಕಾರದ ನಿಲುವನ್ನ ಎಜಿ ಈಗಾಗಲೇ ಕೋರ್ಟ್ ಗೆ ತಿಳಿಸಿದ್ದಾರೆ.ಸಿಎಂ ಗೂ ಸಹ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ವಿಧ್ಯಾರ್ಥಿಗಳು ಪ್ರಚೋದನೆ ಗೆ ಒಳಗಾಗಿ ಗದ್ದಲ ಮಾಡಿಕೊಳ್ಳುವುದು ಬೇಡ. ಪರೀಕ್ಷೆ ಬರುತ್ತಿದೆ, ಸಿದ್ದವಾಗಿ.ವಿದ್ಯಾರ್ಥಿಗಳ ಪೋಷಕರು ಸಹ ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ.ಪರಿಸ್ಥಿತಿ ತಿಳಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next