Advertisement

ಜಗ್ಗೇಶ್ ದಂಗಾಗಿದ್ದು ಯಾಕೆ ಗೊತ್ತಾ?: ಟ್ವೀಟ್‍ನಲ್ಲೇನಿದೆ

06:10 PM Dec 20, 2018 | Team Udayavani |

ನವರಸ ನಾಯಕ ಜಗ್ಗೇಶ್ ಈ ಹಿಂದೆ ತಾವು ಹೆಣ್ಣುಮಗುವಿನ ತಾತನಾದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ದೊಡ್ಡ ಮಗ ಗುರುರಾಜ್ ನಟನೆಯನ್ನು ನೋಡಿ ದಂಗಾಗಿದ್ದಾರೆ. ಹಾಗಂತ ಅವರೇ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

ಹೌದು, ಜಗ್ಗೇಶ್ ಅವರು “ನಾನು ನೋಡಿ ದಂಗಾದ ಅದ್ಭುತ #Raw ಚಿತ್ರ.. ನಿರ್ದೇಶಕ ಚಂದ್ರಹಾಸ ಪ್ರತಿ ತುಣಕನ್ನು ಅಳೆದು ತೂಗಿ ಮಾಡಿದ್ದಾನೆ.. ನಾನು ಒಬ್ಬ ಕಲಾವಿದನಾಗಿ ಬದುಕಲ್ಲಿ ಇಂಥ ಚಿತ್ರ ಮಾಡುವ ಯೋಗ ನನಗೆ ಬರಲಿಲ್ಲವೆ ಎಂದು ಕೊರಗಿದೆ! ನನ್ನ ಮಗ #Gururajjaggeshಗೆ ಈ ಚಿತ್ರ ಒಂದು ಮೈಲಿಗಲ್ಲಾಗುತ್ತೆ ಎಂದು ನಂಬಿಕೆಯಿಂದ ಹೇಳುವೆ.. ಚಿತ್ರತಂಡಕ್ಕೆ ಶುಭಹಾರೈಕೆ..’ ಹೇಳುವೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ಸ್ಕೈಲೈನ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಚಂದ್ರಹಾಸ್ ಅವರು ನಿರ್ಮಿಸಿ ನಿರ್ದೇಶನ ಮಾಡಿರುವ “ಕಾಗೆ ಮೊಟ್ಟೆ’ ಚಿತ್ರದಲ್ಲಿ ಜಗ್ಗೇಶ್​​ ಮಗ ಗುರುರಾಜ್ ನಾಯಕನಾಗಿ ವಿಭಿನ್ನವಾದ ಪಾತ್ರದಲ್ಲಿ ಮಿಂಚಿದ್ದಾರೆ. “ಕಾಗೆ ಮೊಟ್ಟೆ’ ಎಂಬ ಟೈಟಲ್​​ ಇರೋ ಈ ಚಿತ್ರಕ್ಕೆ ಪಿಳ್ಳ ಗೋವಿ ಕೃಷ್ಣನ್ ಕಥೆ ಎಂಬ ಟ್ಯಾಗ್‍ಲೈನ್ ಇದೆ. 

ಪಿ.ಎಲ್. ರವಿ ಅವರ ಛಾಯಾಗ್ರಹಣ, ಶ್ರೀವತ್ಸ ಅವರ ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದ್ದು, ಮುಖ್ಯವಾಗಿ ಜಗ್ಗೇಶ್ ಅವರೇ ಮಗನ ಈ ಚಿತ್ರಕ್ಕೆ ಒಂದು ಮಾಸ್ ಸಾಂಗ್ ಕೂಡಾ ಬರೆದಿದ್ದಾರೆ. ಉಳಿದಂತೆ ಜಯಂತ್ ಕಾಯ್ಕಿಣಿ, ಕವಿರಾಜ್ ಅವರು ಹಾಡುಗಳನ್ನು ಬರೆದಿದ್ದು, ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next