Advertisement

ಬಿಜೆಪಿ ಸರ್ಕಾರ ರಚನೆಗೆ ಡಿಕೆಶಿ ಸಹಕಾರ: ಯತ್ನಾಳ

06:42 AM Jun 24, 2019 | Lakshmi GovindaRaj |

ವಿಜಯಪುರ: ಆದಾಯ ತೆರಿಗೆ ದಾಳಿ ಸಂಕಷ್ಟದಿಂದ ಪಾರಾಗಲು ಸಚಿವ ಡಿ.ಕೆ.ಶಿವಕುಮಾರ ಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಲು ಸ್ವಯಂ ಪ್ರೇರಿತರಾಗಿ ಸಿದ್ಧರಾಗಿದ್ದಾರೆ. ಇದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣ ಕೈ ಬಿಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮೇಲೆ ಒತ್ತಡ ಹೇರಿಸುವ ಲಾಬಿ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರಭಾವಿ ಮುಖಂಡರೊಬ್ಬರ ಮೂಲಕ ಅಮಿತ್‌ ಶಾ, ಕೇಂದ್ರದ ಸಚಿವರ ಮೇಲೆ ಒತ್ತಡ ಹಾಕಿಸಲು ಅವರು ಮುಂದಾಗಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪತನಕ್ಕೆ ವಿರೋ ಧಿಸದೆ ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡುವುದಾಗಿ ಕಾಂಗ್ರೆಸ್‌ನ “ಟ್ರಬಲ್‌ ಶೂಟರ್‌’ ಅಂಗಲಾಚುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆ ವಿಷಯವಾಗಿ ಡಿ.ಕೆ.ಶಿವಕುಮಾರ ಅವರನ್ನು ಯಾರೂ ಆಹ್ವಾನಿಸದಿದ್ದರೂ ಸ್ವಯಂ ಪ್ರೇರಿತರಾಗಿ ಅವರು ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next