Advertisement

ಚೆನ್ನಪಟ್ಟಣ:ಯೋಗೇಶ್ವರ್‌ ವಿರುದ್ಧ ಡಿಕೆ ಬ್ರದರ್ಸ್‌ ಸಮರ!

04:23 PM Jan 03, 2018 | |

ಚೆನ್ನಪಟ್ಟಣ : ಕಾಂಗ್ರೆಸ್‌  ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಚೆನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ವಿರುದ್ಧ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೆಂಡಾಮಂಡಲವಾದ ಘಟನೆ ಬುಧವಾರ ನಡೆಯಿತು. 

Advertisement

ಚೆನ್ನಪಟ್ಟಣದಲ್ಲಿ ನಡೆದ ಸರ್ಕಾರದ ಬೃಹತ್‌  ಸಾಧನಾ ಸಮಾವೇಶದಲ್ಲಿ ತೀವ್ರವಾಗಿ ಕಿಡಿ ಕಾರಿದ ಡಿ.ಕೆ.ಶಿವಕುಮಾರ್‌ ಅವರು ‘ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಹೆಸರಿಗೆ ಮಾತ್ರ, ನಿಜವಾದ ಅಭ್ಯರ್ಥಿಗಳು ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ .ಸುರೇಶ್‌ . ನಾವು ನಿಮ್ಮ ಸೇವೆ ಮಾಡುತ್ತೇವೆ, ನಿಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತೇವೆ’ ಎಂದು ಗುಡುಗಿದರು. 

‘ಎಲ್ಲವನ್ನು ಕೊಟ್ಟ ಪಕ್ಷಕ್ಕೆ ಯೋಗೇಶ್ವರ್‌ ದ್ರೋಹ ಎಸಗಿ ಬಿಜೆಪಿಗೆ ಸೇರಿದ್ದಾರೆ. ಅವರು ಹೆತ್ತ ತಾಯಿಗೆ ಮೋಸ ಮಾಡಿದಂತಾಗಿದೆ. ಉಪಕಾರ ಪಡೆದು ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ’ ಎಂದು ಕಿಡಿ ಕಾರಿದರು. 

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಯೋಗೇಶ್ವರ್‌ ವಿರುದ್ಧ ಕಿಡಿ ಕಾರಿದರು. ‘ಯೋಗೇಶ್ವರ್‌ ಸರ್ಕಾರಿ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ. ಇಲ್ಲಿ ಬಂದರೆ ಸುಳ್ಳು ಹೇಳಿದ್ದು ಗೊತ್ತಾಗುತ್ತದೆ ಅಲ್ಲವೇ ಅದಕ್ಕೇ ಬರಲಿಲ್ಲ. ಅಭಿವೃದ್ಧಿ ಮಾಡಿದ್ದೇನೆ ಅನ್ನುತ್ತಾರಲ್ಲ, ನಾನು ಅನುದಾನವನ್ನೇ ಕೊಡದಿದ್ದರೆ ಅಭಿವೃದ್ಧಿ ಹೇಗೆ ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next