Advertisement

ದ.ಕ. ಜಿಲ್ಲೆಯಲ್ಲಿ  35,460 ಎಕ್ರೆ ಭತ್ತ ನಾಟಿ

08:27 AM Aug 05, 2017 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು ಇದುವರೆಗೆ 35,460 ಎಕ್ರೆ ಭೂಮಿಯಲ್ಲಿ ಭತ್ತದ ನಾಟಿ ಮಾಡಲಾಗಿದೆ.

Advertisement

ಮಂಗಳೂರು ತಾಲೂಕಿನಲ್ಲಿ 3,000 ಹೆಕ್ಟೇರ್‌ (7,410 ಎಕ್ರೆ), ಬಂಟ್ವಾಳ- 5,200 ಹೆಕ್ಟೇರ್‌ (12,844 ಎಕ್ರೆ), ಬೆಳ್ತಂಗಡಿ-4,550 ಹೆಕ್ಟೇರ್‌ (11,238 ಎಕ್ರೆ), ಪುತ್ತೂರು-1,250 (3,087 ಎಕ್ರೆ) ಹೆಕ್ಟೇರ್‌ ಹಾಗೂ ಸುಳ್ಯ ತಾಲೂಕಿನಲ್ಲಿ 350 ಹೆಕ್ಟೇರ್‌ (864 ಎಕ್ರೆ) ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿದೆ.

ಜಿಲ್ಲೆಯಲ್ಲಿ 2015-16ರಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಗೆ ಸೇರಿ 2013-14ರಲ್ಲಿ 56,452 ಹೆಕ್ಟೇರ್‌, 2014-15ರಲ್ಲಿ 53,640 ಹೆಕ್ಟೇರ್‌, 48,689 ಹೆಕ್ಟೇರ್‌ ಹಾಗೂ 2016-17ರಲ್ಲಿ 43,282 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿತ್ತು. 

ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಸುಮಾರು 504 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ರಾಜ್ಯ ಸರಕಾರವು ರೈತರಿಗೆ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಖರೀದಿಸಲು ಸಹಾಯಧನವನ್ನೂ ನೀಡುತ್ತಿದೆ. ರಸಗೊಬ್ಬರದ ಕೊರತೆಯಾಗದಂತೆ ಪ್ರಸಕ್ತ ಖಾರೀಫ್‌ ಸೀಸನ್‌ನಲ್ಲಿ 9,330 ಟನ್‌ ರಸಗೊಬ್ಬರ ವಿರಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 7,500 ಟನ್‌ ವಿತರಿಸಲಾಗಿದೆ. ಇನ್ನೂ 1,750 ಟನ್‌ ಸಂಗ್ರಹಿಸಿಡಲಾಗಿದೆ. 
ಖಾಸಗಿ ವಿತರಕರಲ್ಲದೆ ವಿವಿಧ ಸಹಕಾರ ಸಂಘಗಳು, ಸೊಸೈಟಿಗಳ ಮೂಲಕವೂ ರಸಗೊಬ್ಬರವನ್ನು ರೈತರು ಖರೀದಿಸುತ್ತಿದ್ದಾರೆ.

ಕೃಷಿ ಯಂತ್ರಧಾರೆ ಯೋಜನೆ
ರೈತರಿಗೆ ಕೃಷಿಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ಕೃಷಿ ಯಂತ್ರಧಾರೆ ಯೋಜನೆ ಜಾರಿಗೆ ತರಲಾಗಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್‌, ಟ್ರಾಕ್ಟರ್‌, ನಾಟಿಯಂತ್ರ, ಸ್ಪೇಯರ್‌, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ¤ತಿತರ ಯಾಂತ್ರೀಕೃತ ಉಪಕರಣಗಳನ್ನು ರೈತರು ಬಾಡಿಗೆಗೆ ಪಡೆಯಬಹುದಾಗಿದೆ. ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ. ಯಂತ್ರಗಳ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಪ್ರತೀ ಎಕ್ರೆಗೆ 1,600 ರೂ.ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದ್ದು ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿದ್ದಾರೆ. ರೈತರಿಗೆ ಶೇ.90ರಷ್ಟು ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ, ಸಾಮಾನ್ಯ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 75ರ ರಿಯಾಯಿತಿ ದರದಲ್ಲಿ ಕೃಷಿ ಸುಣ್ಣ, ಸಾವಯವ ಗೊಬ್ಬರವನ್ನು ಬೇಡಿಕೆಯನುಸಾರ ಪೂರೈಸಲಾಗುತ್ತಿದೆ. ಕಳೆದ 4 ವರ್ಷದಲ್ಲಿ 1.35 ಕೋ.ರೂ. ಅನುದಾನದಲ್ಲಿ 205 ಪವರ್‌ ಟಿಲ್ಲರ್‌ ಹಾಗೂ 2.69 ಕೋ.ರೂ. ಅನುದಾನದಲ್ಲಿ 2,168 ಪವರ್‌ ವೀಡರ್‌ ವಿತರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next