Advertisement

Ram Mandir: 5 ಲಕ್ಷ ಹಳ್ಳಿಗಳಲ್ಲಿ ರಾಮನ ಅಕ್ಷತೆ ವಿತರಣೆ

11:19 PM Oct 08, 2023 | Team Udayavani |

ಲಕ್ನೋ: ಅಯೋಧ್ಯೆ ಶ್ರೀರಾಮ ಲಲ್ಲಾನ ಪಟ್ಟಾಭಿಷೇಕ ಸಮೀಪಿಸುತ್ತಿ ರುವ ನಡುವೆಯೇ ರಾಷ್ಟ್ರಾದ್ಯಂತ ಅಭಿಯಾನವೊಂದನ್ನು ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಘೋಷಿ ಸಿದ್ದು, ರಾಮಭಕ್ತರಿಗಾಗಿ ಪ್ರಭು ಶ್ರೀರಾಮನಿಗೆ ಸಮರ್ಪಿತವಾದ ಅಕ್ಷತೆಯನ್ನು ದೇಶದ 5 ಲಕ್ಷ ಹಳ್ಳಿಗಳಲ್ಲಿ ವಿತರಿಸಲು ನಿರ್ಧರಿಸಿದೆ.

Advertisement

ದಸರಾದ ಬಳಿಕ ಸೂಕ್ತ ದಿನದಂದು ಅಕ್ಷತಾ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ ವಿಶ್ವ ಹಿಂದೂ ಪರಿಷತ್‌ನ 50 ಕೇಂದ್ರಗಳಿಂದ ಸ್ವಯಂಸೇವಕರು ಅಯೋಧ್ಯೆಗೆ ಬಂದು ಅಕ್ಷತೆಯನ್ನು ಕೊಂಡೊಯ್ಯುತ್ತಾರೆ. ಬಳಿಕ ಆಯಾ ಕ್ಷೇತ್ರಗಳಿಂದ ಯಾವೆಲ್ಲ ವ್ಯಾಪ್ತಿಗಳಲ್ಲಿ, ಯಾವ ರೀತಿ ಹಳ್ಳಿಗಳನ್ನು ತಲುಪಿ ಅಕ್ಷತೆ ವಿತರಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಜನವರಿ 1 ರಿಂದ 15ರ ವರೆಗೆ ಅಕ್ಷತೆಯನ್ನು ದೇಶಾದ್ಯಂತ ಹಳ್ಳಿಗಳಲ್ಲಿ ವಿತರಿಸಲಾಗುತ್ತದೆ ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next