Advertisement

ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ

12:48 PM Jan 29, 2022 | Team Udayavani |

ಜೇವರ್ಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಸಾಹು ಗೋಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಬಡ, ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಶುಕ್ರವಾರ ಚಾಲನೆ ನೀಡಿದರು.

Advertisement

ತಾಲೂಕಿನ ಹರವಾಳ ಕ್ರಾಸ್‌ ಹತ್ತಿರದ ಶ್ರೀ ಮೂಕಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿಟ್‌ ವಿತರಿಸುವ ಸಮಾರಂಭದಲ್ಲಿ ಬಡವರಿಗೆ, ನಿರ್ಗತಿಕ ಕುಟುಂಬಗಳಿಗೆ ಜೋಳ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ವಿವಿಧ ಪದಾರ್ಥಗಳ ಆಹಾರ ಧಾನ್ಯದ ಕಿಟ್‌ಗಳನ್ನು ಮಾಲೀಕಯ್ಯ ಗುತ್ತೇದಾರ ವಿತರಿಸಿ, ಅಶೋಕ ಗೋಗಿ ಕಾರ್ಯವನ್ನು ಶ್ಲಾಘಿಸಿದರು.

ನಂತರ ತಾಲೂಕಿನ ರದ್ದೇವಾಡಗಿ, ಕೋಳಕೂರ, ಕೂಡಿ, ರಾಸಣಗಿ, ಬಣಮಿ, ಕೋಬಾಳ, ಹಂದನೂರ ಸೇರಿದಂತೆ 20 ಹಳ್ಳಿಗಳಿಗೆ ತೆರಳಿ ನೂರಾರು ಬಡವರಿಗೆ ಕಿಟ್‌ ವಿತರಿಸಲಾಯಿತು.

ಸಮಾಜ ಸೇವಕ ಅಶೋಕ ಸಾಹು ಗೋಗಿ, ಶಿವಾನಂದ ಸಾಹು ಮಾಕಾ, ರೇವಣಸಿದ್ಧ ಅಕ್ಕಿ, ಶರಣು ಮುತ್ತಕೋಡ ಕಲ್ಲಹಂಗರಗಾ, ದೇವಿಂದ್ರ ಜನಿವಾರ, ಶಂಕರಲಿಂಗ ಕರಕಿಹಳ್ಳಿ, ಹಣಮಂತ್ರಾವ ಹೂಗಾರ, ಅಶೋಕ ಸಾಹು ಗಣಜಲಖೇಡ, ಪ್ರಭಾಕರ ರಬಶೆಟ್ಟಿ, ವಿಶ್ವನಾಥ ಪಾಟೀಲ ಗವನಳ್ಳಿ, ಬಸವರಾಜ ಮಾಲಿಪಾಟೀಲ ಗವನಳ್ಳಿ, ನಾಗರಾಜ ಕಲ್ಲಹಂಗರಗಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next