Advertisement

“ರಿವೀಟ್‌ಮೆಂಟ್‌’ಕೊರತೆಯಿಂದ ಸಂಚಾರ ವ್ಯವಸ್ಥೆಗೆ ತಡೆ​​​​​​​

06:30 AM Jun 26, 2018 | Team Udayavani |

ಕೊಲ್ಲೂರು: ಮಾರಣಕಟ್ಟೆ- ಸನ್ಯಾಸಿಬೆಟ್ಟು ಸಂಪರ್ಕ ಕಿರುಸೇತುವೆ ನಿರ್ಮಾಣ ಗೊಂಡು ಒಂದೂವರೆ ವರ್ಷ ಕಳೆದರೂ “ರಿವೀಟ್‌ಮೆಂಟ್‌’ ಕಾಮಗಾರಿ ಪೂರ್ಣಗೊಳ್ಳದೇ ಸಂಚಾರಕ್ಕೆ ತೊಡಕಾಗಿ ರುವುದು ನಿತ್ಯ ಪ್ರಯಾಣಿಕರ ಪಾಲಿಗೆ ಗೋಳಾಗಿದೆ.

Advertisement

ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆ ಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು.
 
ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ  ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿಪ್ರಾಧಿಕಾರದ ನೇತƒತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಸೇತುವೆ ನಿರ್ಮಾಣವಂತೂ ಪೂರ್ಣ ವಾಗಿದೆ. ಆದರೆ ಅವುಗಳ ಇಕ್ಕೆಲಗಳ ರಸ್ತೆಯ ಅಂಚಿಗೆ ಮಣ್ಣು ತುಂಬಿಸಿ ರಿವೀಟ್‌ಮೆಂಟ್‌ ಕಾಮಗಾರಿ ಆರಂಭಗೊಳ್ಳದಿರುವುದು ಸಂಚಾರಕ್ಕೆ ತೊಡಕಾಗಿದೆ. ರಿûಾ ಸಮೇತ ದ್ವಿಚಕ್ರ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. 

ಭಾರೀ ಮಳೆಯಿಂದಾಗಿ ರಸ್ತೆಯ ಬದಿಗೆ ತುಂಬಿಸಿದ ಮಣ್ಣು ನೀರು ಪಾಲಾಗಿದೆ. ಆ ಮಾರ್ಗವಾಗಿ ಸಾಗುವ ಮಂದಿಯ ಗೋಳು ಹೇಳತೀರದು. ಕಿರು ಸೇತುವೆ ನಿರ್ಮಾಣವಾದರೂ ಬಳಕೆಗೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲುಸಂಕ ನಿರ್ಮಾಣವಾಗಿದ್ದರೂ ಅದಕ್ಕೆ ಪೂರಕವಾಗಿ ನಿರ್ಮಿಸಬೇಕಾದ ರಿವೀಟ್‌ಮೆಂಟ್‌ ಗೆ ಸುಮಾರು 4 ಲಕ್ಷ ಅಂದಾಜು ವೆಚ್ಚ  ತಗಲಲಿದೆ. ಆದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತಮಗೆ ಬಿಡುಗಡೆಯಾದ ರೂ. 10 ಲಕ್ಷಕ್ಕೆ ಸೀಮಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು ಮುಂದಿನ ಅನು ದಾನಕ್ಕಾಗಿ ತಾ.ಪಂ., ಗ್ರಾ.ಪಂ. ಗಳು ಜಿ.ಪಂ. ಮೊರೆ ಹೋಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

Advertisement

ಅನುದಾನಕ್ಕಾಗಿ ಶಾಸಕರಿಗೆ ಮನವಿ
ಚಿತ್ತೂರು ಗ್ರಾ.ಪಂ. ನಲ್ಲಿರುವ ಅನು ದಾನವು ಸೀಮಿತವಾಗಿದ್ದು ಅದು ಗ್ರಾ.ಪಂ. ವಿವಿಧ ಕಾಮಗಾರಿಗಳು ಹಾಗೂ ಇತರ ಸೌಕರ್ಯಗಳಿಗೆ ಬಳಸಬೇಕಾಗಿದ್ದು ಅಷ್ಟೊಂದು ಮೊತ್ತದ ಹಣವನ್ನು ಕ್ರೋಡೀ ಕರಿಸುವುದು ಕಷ್ಟಸಾಧ್ಯವೆಂದು ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ ಮಡಿವಾಳ ಅಭಿಪ್ರಾಯ ಪಟ್ಟಿದ್ದಾರೆ. ನೂತನ ಶಾಸಕರಲ್ಲಿ ಮನವಿ ಸಲ್ಲಿಸಿ ಅನುದಾನಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ತಾ.ಪಂ.ನಲ್ಲಿ ಪ್ರಸ್ತಾಪ 
ಸಂನ್ಯಾಸಿಬೆಟ್ಟು-ಚಿತ್ತೂರು ಸಂಪರ್ಕ ಕಿರುಸೇತುವೆ  ನಿರ್ಮಾಣವಾಗಿದ್ದರೂ ಅನುದಾನದ ಕೊರತೆಯಿಂದ ರಿವೀಟ್‌ಮೆಂಟ್‌ ಕಾಮಗಾರಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ತಾ.ಪಂ. ನಲ್ಲಿ ಪ್ರಸ್ತಾಪಿಸಿ ಜಿಲ್ಲಾ ಪಂಚಾಯತ್‌ ಗಮನಕ್ಕೆ ತಂದು ಅಪೂರ್ಣ ಕಾಮಗಾರಿ ಭರ್ತಿ ಮಾಡಲು ಪ್ರಯತ್ನಿಸಲಾಗುವುದು . 
– ಉದಯ ಜಿ. ಪೂಜಾರಿ, ತಾ.ಪಂ. ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next