Advertisement

ಗ್ರಾಮ ನೈರ್ಮಲ್ಯದಿಂದ ರೋಗ ಮುಕ್ತ

06:34 PM Feb 19, 2021 | Team Udayavani |

ಪಾತಪಾಳ್ಯ: ಗ್ರಾಮ ನೈರ್ಮಲ್ಯ ಕಾಪಾಡುವುದರಿಂದ ರೋಗಗಳಿಂದ ಮುಕ್ತರಾಗಬಹುದು ಎಂದು ಪಿಡಿಒ ಎಂ.ವೆಂಕಟರವಣಪ್ಪ ತಿಳಿಸಿದರು.

Advertisement

ತೋಳ್ಳಪಲ್ಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ನಿರ್ಮಿಸುತ್ತಿದ್ದ ಚರಂಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಮಲೀನ ನೀರು ರಸ್ತೆಗೆ ಹರಿಯುವುದರಿಂದ ರಸ್ತೆ ಹಾಳಾಗುತ್ತದೆ. ಉತ್ಪತ್ತಿಯಾದ ಸೊಳ್ಳೆಗಳು ಕಚ್ಚುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಗ್ರಾಮೀಣರು ಮಲೀನ ನೀರು ರಸ್ತೆಗೆ ಹರಿಯದಂತೆ ಎಚ್ಚರಿಕೆ ವಹಿಸಬೇಕು. ನರೇಗಾ ಯೋಜನೆಯಲ್ಲಿ ಮನೆಗೊಂದು ಶೌಚಾಲಯ, ಇಂಗುಗುಂಡಿ ನಿರ್ಮಿಸಿಕೊಳ್ಳಲು ಅನುಕೂಲವಿದ್ದು, ಪ್ರತಿಯೊಬ್ಬರೂ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮದ ಸ್ವತ್ಛತೆ ಕಾಪಾಡಬೇಕೆಂದು ತಿಳಿಸಿದರು.

ಕರವಸೂಲಿಗಾರ ಟಿ.ಎಸ್‌.ಕೃಷ್ಣಪ್ಪ, ಡಿ.ಇ.ಒ. ಜಿ.ಲಲಿತಮ್ಮ, ಗುಮಾಸ್ತ ಟಿ.ಸಿ.ಚಂದ್ರಶೇಖರರೆಡ್ಡಿ, ಸಿಬ್ಬಂದಿ ಸಿ.ಎ.ನರಸಿಂಮೂರ್ತಿ, ಎ.ಎನ್‌. ವೆಂಕಟರಾಮ ಹಾಗೂ ಕೂಲಿ ಕಾರ್ಮಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next