Advertisement

Tumakuru ಕಚೇರಿ ವಾಪಸ್‌ ವಿಚಾರ ಸಿಎಂ ಜತೆ ಚರ್ಚೆ: ಸಚಿವ ಸೋಮಣ್ಣ

01:55 AM Aug 18, 2024 | Team Udayavani |

ಬಾಳೆಹೊನ್ನೂರು: ತುಮಕೂರಿನಲ್ಲಿ ನನಗೆ ನೀಡಿದ್ದ ಸರಕಾರಿ ಕಚೇರಿಗೆ ಬೀಗ ಹಾಕಿ ವಾಪಸ್‌ ಪಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ರಂಭಾಪುರಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಸದಸ್ಯರಿಗೆ ಬಹುತೇಕ ಕಡೆ ಮುಖ್ಯಮಂತ್ರಿಗಳೇ ಜಿಲ್ಲಾ ಕೇಂದ್ರಗಳಲ್ಲಿ ಕಚೇರಿ ಹಂಚಿಕೆ ಮಾಡುತ್ತಾರೆ.

Advertisement

ನನಗೆ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೀಡಿದ್ದ ಸಂಸದರ ಕಚೇರಿಗೆ ವರಮಹಾಲಕ್ಷ್ಮೀ ಹಬ್ಬದ ದಿನ ನನ್ನ ಸಿಬಂದಿ ಪೂಜೆ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಅದರ ಉದ್ಘಾಟನೆ ಕಾರ್ಯಕ್ರಮವೂ ಇತ್ತು. ಆದರೆ ಈಗ ಬೀಗ ಹಾಕಿ ವಾಪಸ್‌ ಯಾಕೆ ಪಡೆದಿದ್ದಾರೆ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೆ ಕರೆ ಮಾಡಿದರೂ ಸಿಗುತ್ತಿಲ್ಲ. ಬೆಂಗಳೂರಿಗೆ ತೆರಳಿ ಮಾತನಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next