Advertisement

CM Siddaramaiah ಬದಲಾವಣೆ ಬಿಜೆಪಿಯ ಸೃಷ್ಟಿ: ಸಚಿವ ಭೋಸರಾಜು ಆರೋಪ

09:18 PM Sep 09, 2024 | Team Udayavani |

ಬೆಂಗಳೂರು: “ಸಿಎಂ ಬದಲಾವಣೆ ಬಿಜೆಪಿಯ ಸೃಷ್ಟಿ. ಜನರನ್ನು ಡೈವರ್ಟ್‌ ಮಾಡಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ’ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಭೋಸರಾಜು ಆರೋಪಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಸಚಿವರಿಗೆ ಏನೋ ಕೇಳಿದಾಗ ಸುಮ್ಮನೆ ಹೇಳುತ್ತಾರೆ. ಅಷ್ಟಕ್ಕೂ ಎಲ್ಲರೂ ಒಂದೇ ಮಾತು ಹೇಳಿದ್ದಾರೆ. ಅದು  ಸಿಎಂ ಸ್ಥಾನಕ್ಕಾಗಿ ಯಾರೂ ಆಪೇಕ್ಷೆಪಟ್ಟಿಲ್ಲ ಅಂತ. ನಾನು ಕೂಡ ಎಲ್ಲರ ಜತೆ ಸಂಪರ್ಕದಲ್ಲಿದ್ದೇನೆ. ಎಲ್ಲರೂ ಸಿದ್ದರಾಮಯ್ಯ ಕಡೆಗೇ ಇದ್ದಾರೆ. ಸಿಎಂ ಬದಲಾವಣೆ ವಿಚಾರ ಸೃಷ್ಟಿ ಬಿಜೆಪಿಯದ್ದು. ಜನರನ್ನು ಡೈವರ್ಟ್‌ ಮಾಡಲು ಹೀಗೆ ಮಾಡುತ್ತಿದ್ದಾರೆ. ನಿತ್ಯ ಒಂದೊಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೂ ಇಲ್ಲ. ಅಂತಹ ಪ್ರಸಂಗವೂ ಇಲ್ಲ. ನಾವೆಲ್ಲರೂ ಒಂದಾಗಿಯೇ ಇದ್ದೇವೆ ಎಂದ ಅವರು, “ಕಾಂಗ್ರೆಸ್‌ ಸರ್ಕಾರದ ಸಂಪುಟದಲ್ಲಿ ಏನಾದರೂ ಬದಲಾವಣೆಯನ್ನು ನೀವು ನೋಡಿದ್ದೀರಾ? ಇಲ್ಲ. ಅದೇ ಬಿಜೆಪಿ ಸರ್ಕಾರ ಇದ್ದಾಗ ಏನಾಗಿತ್ತು? ಸಂಪುಟದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿತ್ತು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನಾನೂ ದೆಹಲಿಗೆ ಹೋಗುತ್ತಿದ್ದೇನೆ: ಸಚಿವರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಎಲ್ಲ ಸಚಿವರು ಕೆಲಸದ ಮೇಲೆ ಹೋಗಿರುತ್ತಾರೆ. ಸತೀಶ್‌ ಜಾರಕಿಹೊಳಿ ಹೋಗಿದ್ದಾರೆ. ಮುಂದಿನ ವಾರ ನಾನೂ ಹೋಗುತ್ತಿದ್ದೇನೆ. ಇಲಾಖೆಗೆ ಸಂಬಂಧಿಸಿದಂತೆ ಮಾತುಕತೆ ಇರುತ್ತದೆ. ಹೀಗೆ ದೆಹಲಿಗೆ ಹೋದರೆ, ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇವೆ ಅಷ್ಟೇ. ಕೋರ್ಟ್‌ನಲ್ಲಿ ಯಾವುದೇ ತೀರ್ಮಾನ ಬರಲಿ. ನ್ಯಾಯಾಂಗ ಏನು ಹೇಳುತ್ತೆ ಅದನ್ನು ಕೇಳುತ್ತೇವೆ. ಸಿದ್ದರಾಮಯ್ಯ ನಾಯಕತ್ವವನ್ನು ಅಲ್ಲಾಡಿಸಲಿಕ್ಕೂ ಆಗುವುದಿಲ್ಲ’ ಎಂದು ಪುನರುತ್ಛರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next