Advertisement

CM Office: ಎಂಎಲ್‌ಎ ಆಗಿರೋದು ಟ್ರಾನ್ಸ್‌ಫ‌ರ್‌ ಮಾಡೊಕ್ಕಾ: ಸಿದ್ದರಾಮಯ್ಯ ಗರಂ

12:22 AM Sep 05, 2024 | Team Udayavani |

ಬೆಂಗಳೂರು: ನಿಮಗೇನು ಬೇರೆ ಕೆಲಸ ಇಲ್ಲವಾ ? ಎಂಎಲ್‌ಎ ಆಗಿರೋದು ಬರೀ ಟ್ರಾನ್ಸ್‌ಫ‌ರ್‌ ಮಾಡಿಕೊಡೋದಕ್ಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿಯೊಬ್ಬರಿಗೆ ಗದರಿದ ಪ್ರಸಂಗ ನಡೆಯಿತು.

Advertisement

ಬುಧವಾರ ಬೆಳಗ್ಗೆ ಸರಕಾರಿ ನಿವಾಸ ಕಾವೇರಿಯಿಂದ ಗೃಹಕಚೇರಿ ಕೃಷ್ಣಾದತ್ತ ನಡೆದು ಬರುತ್ತಿದ್ದ ಸಿಎಂ ಅವರನ್ನು ಕಂಡು ಅಹವಾಲು ಸಲ್ಲಿಸಲು ಸಾರ್ವಜನಿಕರು ನಿಂತಿದ್ದರು. ಮನವಿ ಪತ್ರಗಳನ್ನು ಸ್ವೀಕರಿಸುತ್ತ ಬಂದ ಸಿಎಂ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಮನವಿ ಪತ್ರ ಸಲ್ಲಿಸುತ್ತಿದ್ದಂತೆ ಹೇಳಿದ್ದೀನಯ್ಯ… ಹೋಗಿ ಆಶಾ ಅವರನ್ನು ಕಾಣು ಅಂತ ಹೇಳಿರಲಿಲ್ವ? ಹೋಗಿ ನೋಡು ಎಂದರು.

ಅಷ್ಟರಲ್ಲಿ ಗುಂಪಿನಲ್ಲಿ ಮತ್ತೂಬ್ಬ ವ್ಯಕ್ತಿ ಒಂದು ವಾರದ ಹಿಂದೆ ಕೊಟ್ಟಿದ್ದು ಬುದ್ಧಿ ಎನ್ನುತ್ತ ಮನವಿ ಪತ್ರ ಸಲ್ಲಿಸಿದರು. ಅದನ್ನು ಪಡೆದು ಸಿಎಂ ಮುಂದೆ ತೆರಳುತ್ತಿದ್ದಂತೆ ಒಂದು ವಾರ ಆಯಿತು ಬುದ್ಧಿ ನೋಡಿ ಎನ್ನುತ್ತಿದ್ದಂತೆ ಸಿಟ್ಟಾದ ಸಿಎಂ, ನಿಮಗೇನು ಬೇರೆ ಕೆಲ್ಸ ಇಲ್ವ? ಬರೀ ಟ್ರಾನ್ಸ್‌ಫ‌ರ್‌ಗಳಾ? ಎಂಎಲ್‌ಎ ಆಗೋದು ಬರೀ ಟ್ರಾನ್ಸ್‌ಫ‌ರ್‌ ಮಾಡ್ಸೋಕ್ಕಾ ಎಂದು ಗದರಿ ಮುನ್ನಡೆದರು.

ಎತ್ತಿನಹೊಳೆ ಯೋಜನೆ ನಾಳೆ ಚಾಲನೆ
ಹಾಸನ: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸೆ. 6ರ ಗೌರಿ ಹಬ್ಬದ ಶುಭದಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿಧ್ಯುಕ್ತವಾಗಿ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next