Advertisement

Bengaluru ಸ್ಫೋಟಕ್ಕೆ ಉಗ್ರರ ಸಂಚು: ರಾಜ್ಯ ಬಿಜೆಪಿ ಕಚೇರಿಗೆ ಹೆಚ್ಚುವರಿ ಭದ್ರತೆ

09:36 PM Sep 10, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿಗಳು ರಾಜ್ಯ ಬಿಜೆಪಿ ಕಚೇರಿಯಲ್ಲಿ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಎನ್‌ಐಎ ಮಾಹಿತಿ ಮೇರೆಗೆ ಸುರಕ್ಷತೆಯ ದೃಷ್ಟಿಯಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ.

Advertisement

ಕೆಫೆ ಸ್ಫೋಟದ ರೂವಾರಿಗಳು ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟಕ್ಕೂ ವಿಫ‌ಲ ಯತ್ನಿಸಿದ್ದರು ಎಂದು ರಾಷ್ಟ್ರಿಯ ತನಿಖಾ ದಳ(ಎನ್‌ಐಎ) ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ಈ ಬೆನ್ನಲ್ಲೇ ಮೆಟಲ್‌ ಡಿಟೆಕ್ಟರ್‌ ಮೂಲಕ ಪರಿಶೀಲಿಸಿ ಬಿಜೆಪಿ ಕಚೇರಿ ಒಳಗೆ ಸಾರ್ವಜನಿಕರ ಬಿಡಲಾಗುತ್ತಿದೆ. ಈ ಹಿಂದೆ ವಿವಿಐಪಿಗಳು ಬಂದಾಗ ಮಾತ್ರ ಮೆಟಲ್‌ ಡಿಟೆಕ್ಟರ್‌ ಬಳಸಲಾಗುತ್ತಿತ್ತು. ಇದೀಗ ಪ್ರತಿ ದಿನ ಮೆಟಲ್‌ ಡಿಟೆಕ್ಟರ್‌ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next