Advertisement

ನೇರ ನಗದು ವರ್ಗಾವಣೆ: 50,000 ಕೋಟಿ ಉಳಿತಾಯ

12:43 PM May 29, 2017 | Team Udayavani |

ಹೊಸದಿಲ್ಲಿ: ನೇರ ನಗದು ವರ್ಗಾವಣೆ ಯೋಜನೆಯಿಂದ ಸರಕಾರಕ್ಕೆ ಕಳೆದ 3 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಆಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಗದು ನೇರ ವರ್ಗಾವಣೆಯಲ್ಲಿ 32 ಕೋಟಿ ಜನರಿಗೆ ಲಾಭವಾಗಿದೆ. ಸೋರಿಕೆ ಮತ್ತು ಮಧ್ಯವರ್ತಿ ಹಾವಳಿ ತಪ್ಪಿಸಿದ ಪರಿಣಾಮ ಫ‌ಲಾನುಭವಿಗಳಿಗೆ ಯಾವುದೇ  ಕಿರಿಕಿರಿ ಇಲ್ಲದೆ ಸೌಲಭ್ಯ ತಲುಪುತ್ತಿದೆ ಎಂದಿದ್ದಾರೆ. ಸರಕಾರದ ಸಬ್ಸಿಡಿಯ ಫ‌ಲವನ್ನು 32 ಕೋಟಿ ಜನರು ಪಡೆದುಕೊಂಡಿದ್ದರ ಜತೆಗೆ ಸರಕಾರಕ್ಕೆ 50 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದೂ ಶಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next