Advertisement

ರೇವಣ್ಣ, ದತ್ತ ಎದುರು ಕಣ್ಣೀರಿಟ್ಟ ಧರ್ಮೇಗೌಡ

01:34 AM Mar 01, 2019 | |

ಕಡೂರು: ಇಲ್ಲಿನ ಕ್ಷೇತ್ರದ ಜನ ಒಳ್ಳೆಯವರು.ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡೋಣ ಎಂದು ಆಕಾಂಕ್ಷಿಯಾಗಿದ್ದೆ. ಆದರೆ, ದೇವೇಗೌಡರು ಇಂದು ವೈ.ಎಸ್‌.ವಿ.ದತ್ತ ಅವರನ್ನು ಕಡೂರು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

Advertisement

ಗೌಡರ ಮಾತಿಗೆ ಬೆಲೆ ನೀಡಿ ಗೌರವಿಸುವ ಕುಟುಂಬ ನಮ್ಮದು ಎನ್ನುತ್ತಾ ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೆಗೌಡ ಬಿಕ್ಕಿ ಬಿಕ್ಕಿ ಅತ್ತರು. ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

“ನಮ್ಮ ಕುಟುಂಬಕ್ಕೆ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ರೇವಣ್ಣ ಅವರು ರಾಜಕೀಯ ಪುನರ್‌ ಜನ್ಮ ನೀಡಿದ್ದಾರೆ. ಜಿಲ್ಲೆಯಲ್ಲಿ ಲಕ್ಷ್ಮಯ್ಯನವರ ಮಕ್ಕಳ ರಾಜಕೀಯ ಜೀವನವೇ ಮುಗಿಯಿತು ಎಂದು ಆಡಿಕೊಳ್ಳುತ್ತಿದ್ದಾಗ ನಮಗೆ ವಿಧಾನ ಪರಿಷತ್‌ ಸ್ಥಾನ ನೀಡಿ, ಉಪ ಸಭಾಪತಿ ಹುದ್ದೆ ನೀಡಿದ್ದಾರೆ. ಈ ವಿಷಯದಲ್ಲಿ ಗೌಡರ ಕುಟುಂಬದ ಪಾತ್ರವನ್ನು ಸ್ಮರಿಸುತ್ತೇನೆ’ ಎನ್ನುತ್ತಾ ಭಾವೋದ್ವೇಗಕ್ಕೊಳಗಾದರು.

ಕೂಡಲೆ ಸಚಿವ ರೇವಣ್ಣ ಮತ್ತು ದತ್ತ ಅವರ ಸಮೀಪಕ್ಕೆ ತೆರಳಿ ಅವರನ್ನು ಸಂತೈಸಿದರು. ನಂತರ, ಮಾತು ಮುಂದುವರಿಸಿದ ಅವರು, ಪ್ರಜ್ವಲ್‌ ರೇವಣ್ಣನವರು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿ, ಅವರನ್ನು ಗೆಲ್ಲಿಸುವ ಶಕ್ತಿ ನಮ್ಮಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next