Advertisement

ನ.15ಕ್ಕೆ ಧರಣಿ ಮಂಡಲ ಟ್ರೇಲರ್‌

04:19 PM Nov 09, 2022 | Team Udayavani |

“ಧರಣಿ ಮಂಡಲ ಮಧ್ಯದೊಳಗೆ…’ ಎಂಬ ಕನ್ನಡದ ಜನಪ್ರಿಯ ಮಕ್ಕಳ ಗೀತೆಯ ಸಾಲುಗಳನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈಗ ಅದೇ “ಧರಣಿ ಮಂಡಲ ಮಧ್ಯದೊಳಗೆ’ ಎಂಬ ಹೆಸರಿನಲ್ಲಿ ಕನ್ನಡಲ್ಲೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

Advertisement

ಅಂದಹಾಗೆ, ಈ ಸಿನಿಮಾದ ಹೆಸರು “ಧರಣಿ ಮಂಡಲ ಮಧ್ಯದೊಳಗೆ’ ಅಂತಿದ್ದರೂ, ಮಕ್ಕಳ ಗೀತೆಯಲ್ಲಿ ಬರುವ ಕಥೆಗೂ ಈ ಸಿನಿಮಾದ ಕಥೆಗೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಸಬ್ಜೆಕ್ಟ್‌ ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ಸಿನಿಮಾಕ್ಕೆ ಇಂಥದ್ದೊಂದು ಕ್ಯಾಚಿ ಟೈಟಲ್‌ ಇಟ್ಟಿದೆ.

ಔಟ್‌ ಆ್ಯಂಡ್‌ ಔಟ್‌ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದಿರುವ “ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ “ಗುಳ್ಟು’ ಖ್ಯಾತಿಯ ನವೀನ್‌ ಶಂಕರ್‌, ಐಶಾನಿ ಶೆಟ್ಟಿ, ಯಶ್‌ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್‌ ತುಮ್ಮಿನಾಡು, ಓಂಕಾರ್‌, ನಿತೇಶ್‌ ಮಹಾನ್‌, ಜಯಶ್ರೀ ಆರಾಧ್ಯ, ಶಾಂಭವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರ ಇದೇ ನ. 25ಕ್ಕೆ ತೆರೆಗೆ ಬರುತ್ತಿದ್ದು, ಸದ್ಯ ಬ್ಯಾಕ್‌ ಟು ಬ್ಯಾಕ್‌ ಹಾಡುಗಳ ಬಿಡುಗಡೆಯ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ ಚಿತ್ರತಂಡ. ಇತ್ತೀಚೆಗಷ್ಟೇ “ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ “ವಾಟರ್‌ ಮೇಲೆ ವಾಕಿಂಗ್‌ ಹೊಂಟವ್ನೆ’ ಎಂಬ ಪೆಪ್ಪಿ ಸಾಂಗ್‌ ಬಿಡುಗಡೆಯಾಗಿದ್ದು, ನಟ ಶರಣ್‌ ಮತ್ತು ವಾಸುಕಿ ವೈಭವ್‌ ಧ್ವನಿಯಾಗಿರುವ ಈ ಹಾಡನ್ನು ನಟ ನೀನಾಸಂ ಸತೀಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಈ ಹಾಡಿನಲ್ಲಿ ನಟ ಓಂಕಾರ್‌, ಜಯಶ್ರೀ ಆರಾಧ್ಯ ಮತ್ತು ಸಿದ್ದು ಮೂಲಿಮನಿ ಕಾಣಿಸಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಡು ಒಂದಷ್ಟು ಸೌಂಡ್‌ ಮಾಡುತ್ತಿದೆ. ಇದರ ಬೆನ್ನಲ್ಲೇ ಚಿತ್ರತಂಡ, ಇದೇ ನ. 15ಕ್ಕೆ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

Advertisement

“ಬಾಕ್ಸ್‌ ಆಫೀಸ್‌ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಡಿ ಓಂಕಾರ್‌ ನಿರ್ಮಿಸಿರುವ ಈ ಚಿತ್ರಕ್ಕೆ ವೀರೇಂದ್ರ ಕಂಚನ್‌, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಶ್ರೀಧರ್‌ ಶಿಕಾರಿಪುರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next