Advertisement

ಪುನೀತ್ ಬದಲು ರಾಜಕಾರಣಿಗಳನ್ನು ಸಾಯಿಸಬಹುದಿತ್ತು : ಹಾಸನಾಂಬೆಗೆ ಭಕ್ತನ ಪತ್ರ

03:29 PM Nov 08, 2021 | Team Udayavani |

ಹಾಸನ: ಹಾಸನಾಂಬೆಗೆ ಭಕ್ತರು ಸಲ್ಲಿಸಿದ್ದ ಕೋರಿಕೆಯ ಪತ್ರಗಳ ಪೈಕಿ ಅಗಲಿದ ನಟ ಪುನೀತ್ ರಾಜ್ ಕುಮಾರ್ ಬಗ್ಗೆ ನೊಂದ ಅಭಿಮಾನಿಯೊಬ್ಬ ಬರೆದ ಚೀಟಿ ಗಮನ ಸೆಳೆದಿದೆ.

Advertisement

ಭಾವುಕ ಭಕ್ತನೊಬ್ಬ, ಪುನೀತ್ ಕಳೆದುಕೊಂಡ ನೋವಿನಲ್ಲಿ ಪತ್ರಬರೆದಿದ್ದು, ಪತ್ರದಲ್ಲಿ ಹಾಸನಾಂಬ ತಾಯಿಗೆ ಕೋಟಿ ಕೋಟಿ ನಮನಗಳು,ಅಮ್ಮಾ, ಆ ಧರ್ಮಾತ್ಮ ಪುನೀತ್ ರಾಜ್ ಕುಮಾರ್ ನನ್ನ ಸಾಯಿಸುವುದರ ಬದಲು ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು ಮರಿ ಮಕ್ಕಳು ತಿಂದು ತೇಗಿದರೂ ಕರಗದಷ್ಟು ಆಸ್ತಿ ಮಾಡಿ ಸಭೆಗಳಲ್ಲಿ ನಾಟಕವಾಡುತ್ತಾರಲ್ಲ ಅಂತಹ ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ. ಬಡವರು ಸುಖವಾಗಿರುತ್ತಾರೆ.

ಕೋಟಿ ಕೋಟಿ ತಿಂದು ತೇಗುವ ರಾಜಕಾರಣಿಗಳಿಗೆ ಸಾವು ಬರಲಿ ಎಂದು ಅವಾಚ್ಯ ಶಬ್ದಗಳನ್ನು ಬಳಸಿ ರಾಜಕಾರಣಿಗಳನ್ನು ನಿಂದಿಸಿ ಪತ್ರ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next