Advertisement

ಭದ್ರತಾ ವಾಹನ ನಿರಾಕರಿಸಿದ ಫ‌ಡ್ನವಿಸ್‌ ಪತ್ನಿ

11:03 PM Nov 03, 2022 | Team Udayavani |

ಮುಂಬೈ: ರಾಜಕಾರಣಿಗಳು, ಅವರ ಕುಟುಂಬಸ್ಥರು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾರೆನ್ನುವ ಆರೋಪವಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಪತ್ನಿ ಅಮೃತಾ ಫ‌ಡ್ನವಿಸ್‌ ಮಾದರಿಯಾಗಿದ್ದಾರೆ.

Advertisement

ಬ್ಯಾಂಕರ್‌ ಆಗಿರುವ ಅವರು ಮಹಾರಾಷ್ಟ್ರ ಸರ್ಕಾರದಿಂದ ನೀಡಲಾಗುವ ಭದ್ರತಾ ವಾಹನವನ್ನು ನಿರಾಕರಿಸಿದ್ದಾರೆ. ಸಾಮಾನ್ಯರಂತೆಯೇ ಇರುವುದಾಗಿ ಹೇಳಿಕೊಂಡಿದ್ದಾರೆ.

ದೇಶದ ವಾಣಿಜ್ಯ ನಗರಗವಾಗಿರುವ  ಮುಂಬೈನಲ್ಲಿ ಟ್ರಾಫಿಕ್‌ ಬಹಳ ಬೇಸರ ಬರಿಸುವಂತಿದೆ. ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಭರವಸೆ ತನಗಿದೆ ಎಂದಿದ್ದಾರೆ. ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಮೃತಾ ಫ‌ಡ್ನವೀಸ್‌ ಭದ್ರತೆಯನ್ನು  ವೈ ಪ್ಲಸ್‌ ದರ್ಜೆಗೆ ಏರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next