Advertisement

ದೇವಾಡಿಗ ಸಂಘ ಮುಂಬಯಿ ಥಾಣೆ:ಪ್ರತಿಭಾ ಪುರಸ್ಕಾರ

02:11 PM Sep 12, 2017 | Team Udayavani |

ಥಾಣೆ: ದೇವಾಡಿಗ ಸಂಘ ಮುಂಬಯಿ ಇದರ ಥಾಣೆ ಪ್ರಾದೇಶಿಕ ಸಮನ್ವಯ ಸಮಿತಿಯ ವತಿಯಿಂದ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಸಭಾಗೃಹದಲ್ಲಿ ಆಟಿಡೊಂಜಿ ಕೂಟ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

Advertisement

ಸಮಿತಿಯಿ  ಕಾರ್ಯಾಧ್ಯಕ್ಷ ಅಶೋಕ್‌ ದೇವಾಡಿಗ ಇವರ ಅಧ್ಯಕ್ಷತೆಯಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ರಾಜು ದೇವಾಡಿಗ, ಪ್ರವೀಣ್‌ ಸಾಲ್ಯಾನ್‌,  ಕಾರ್ಯದರ್ಶಿ  ಮಂಜುನಾಥ್‌ ದೇವಾಡಿಗ, ಕೋಶಾಧಿಕಾರಿ ಯಾದವ ದೇವಾಡಿಗ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಗೋಪಾಲ ಶೇರಿಗಾರ್‌ ಅವರು ಪ್ರಾರ್ಥನೆಗೈದರು. ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದನ್ನು ಕಂಡು ಸಂತೋಷವಾಗುತ್ತಿದೆ. ಸಮಾಜ ಬಾಂಧವರು ನೂತನ ಸದಸ್ಯತನ ನೋಂದಾವಣೆ ಮತ್ತು ವೈದ್ಯಕೀಯ ನಿಧಿ ಸಂಗ್ರಹದ ಬಗ್ಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಬೇಕು ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಜೊತೆ ಕಾರ್ಯದರ್ಶಿ ಗಣೇಶ ಶೇರಿಗಾರ, ಮಾಲತಿ ಮೊಲಿ, ಮಹಿಳಾ ವಿಭಾಗದ ಅಧ್ಯಕ್ಷೆ  ಜಯಂತಿ ಮೊಲಿ, ಜೊತೆ ಕಾರ್ಯದರ್ಶಿ ರಂಜಿನಿ ಮೊಲಿ,  ಸುರೇಖಾ ದೇವಾಡಿಗ, ಥಾಣೆ ವಲಯದ ಮಹಿಳಾ ಕಾರ್ಯಾಧ್ಯಕ್ಷೆ  ಮಮತಾ ದೇವಾಡಿಗ, ಉಪ ಕಾರ್ಯಾಧ್ಯಕ್ಷೆ ಕವಿತಾ ದೇವಾಡಿಗ, ಕಾರ್ಯದರ್ಶಿ ಉಷಾ  ದೇವಾಡಿಗ, ಜಯಶ್ರೀ ಅಶೋಕ ದೇವಾಡಿಗ ಇವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಕಾರ್ಯಾಧ್ಯಕ್ಷೆ ಮಮತಾ ದೇವಾಡಿಗ ಅವರು ಸ್ವಾಗತಿಸಿದರು.  ಆನಂದ ದೇವಾಡಿಗ ಅವರು, ಥಾಣೆ ವಲಯದ ಪ್ರತಿಭಾವಂತ ವಿದ್ಯಾರ್ಥಿಳಾದ ಕು| ಮೈತ್ರಿ ದೇವಾಡಿಗ , ಕು| ಕಾವ್ಯಶ್ರೀ  ದೇವಾಡಿಗ, ಮಾ|  ಓಜಸ್‌  ದೇವಾಡಿಗ, ಕು| ರಿದ್ದಿ ದೇವಾಡಿಗ, ಕು| ಯಶಿಕಾ ದೇವಾಡಿಗ, ಮಾ| ಜಿತು ದೇವಾಡಿಗ ಅವರ  ನಗದು ಬಹುಮಾನ ಪ್ರಾಯೋಜಕರಾದ ಜಗನ್ನಾಥ ದೇವಾಡಿಗ,  ಸುರೇಶ್‌ ರಾವ್‌,  ಜಯ ದೇವಾಡಿಗ,   ಅಶೋಕ್‌  ದೇವಾಡಿಗ, ಎ. ಆರ್‌. ಆರೆಬೈಲ್‌  ಹಾಗೂ  ಗೋಪಾಲ ಶೇರಿಗಾರ್‌ ಅವರನ್ನು ಸಮ್ಮಾನಿಸಿದರು. ಠಾಣೆ ವಲಯದ ಯುವ ವಿಭಾಗದ ಶ್ರದ್ಧಾ ಆನಂದ ದೇವಾಡಿಗ, ಡಾ| ರಶ್ಮಿ ರಾಜು ದೇವಾಡಿಗ,  ಶ್ರೀಶಾಂತ್‌ ಶ್ರೀಧರ ದೇವಾಡಿಗ, ನಿತೇಶ್‌  ನಾಗೇಶ ದೇವಾಡಿಗ, ವಿಶ್ವನಾಥ್‌ ದೇವಾಡಿಗ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ವೃತ್ತಿ ಮಾರ್ಗದರ್ಶನದ ಬಗ್ಗೆ ಕೆಲವು ಮಾಹಿತಿಯನ್ನು ನೀಡಿದರು.

Advertisement

ದೇವಾಡಿಗ ಸಂಘದ 2016-2019 ನೇ ಸಾಲಿನ  ನೂತನ ಅಧ್ಯಕ್ಷ ರವಿ ಎಸ್‌. ದೇವಾಡಿಗ ಹಾಗೂ  ಜಯಂತಿ ಮೊಲಿ ಇವರನ್ನು  ಪುಷ್ಪಗುತ್ಛವನ್ನಿತ್ತು,  ಶಾಲು ಹೊದಿಸಿ ಗೌರವಿಸಲಾಯಿತು. ಕಳೆದ  12 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಂಗಳಾ ಶ್ರೀನಿವಾಸ ಶೇರಿಗಾರ್‌ ಅವರನ್ನು ಅಭಿನಂದಿಸಲಾಯಿತು. ನವಿಮುಂಬಯಿ  ಸಮಿತಿಯ ಮಾಜಿ ಕಾರ್ಯಾಧ್ಯಕ್ಷ  ಪಿ. ವಿ. ಎಸ್‌. ಮೊಲಿ, ಭಾಂಡೂಪ್‌ ಮತ್ತು ಸಿಟಿ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ವಿಶ್ವನಾಥ್‌ ದೇವಾಡಿಗ,  ಹೇಮನಾಥ ದೇವಾಡಿಗ ಹಾಗೂ ಮಾಲತಿ ಮೊಲಿ, ಜಯಂತಿ ಮೊಲಿ, ರಂಜನಿ ಮೊಲಿ, ಸುರೇಖಾ ದೇವಾಡಿಗ,  ನಿತೇಶ್‌ ದೇವಾಡಿಗ,ಯುವ ವಿಭಾಗದ ಮಾರ್ಗದರ್ಶಕ ನರೇಶ ದೇವಾಡಿಗ ಇವರು ಮಾತನಾಡಿದರು.

ಆಟಿ ತಿಂಗಳ ವಿಶೇಷತೆ, ಆಟಿ ಕಳಂಜ ಇನ್ನಿತರ ವಿಷಯಗಳ ಬಗ್ಗೆ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೀಳಾ ಶೇರಿಗಾರ್‌ ಮಾಹಿತಿ ನೀಡಿದರು. ವಿವಿಧ ಸ್ಪರ್ಧೆಗಳ ಬಹುಮಾನದ  ಪ್ರಾಯೋಜಕತ್ವವನ್ನು ಮಮತಾ ದೇವಾಡಿಗ ವಹಿಸಿದ್ದರು. ಸುಜಾತಾ  ಶೇರಿಗಾರ್‌ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು.  ಮಾ| ಶ್ರೀಧಿತಾ ದೇವಾಡಿಗ, ಕು| ಪ್ರಾಚಿ ದೇವಾಡಿಗ, ಕು| ಗೌರವಿ ಶೇರಿಗಾರ್‌, ಗೀತಾ ದೇವಾಡಿಗ, ನಯನಾ ದೇವಾಡಿಗ, ಕವಿತಾ ದೇವಾಡಿಗ,  ರಂಜಿನಿ ಮೊಲಿ ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.

ಆಟಿ ತಿಂಗಳ ತಿಂಡಿ-ತಿನಸುಗಳನ್ನು ತಯಾರಿಸಿ ಪ್ರದರ್ಶಿಸಿದ ಸದಸ್ಯೆಯರನ್ನು ಗೌರವಿಸಲಾಯಿತು.  ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಕಾರ್ಯಕ್ರಮವನ್ನು ಪ್ರಮಿಳಾ ಶೇರಿಗಾರ್‌  ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸೀಮಾ ದೇವಾಡಿಗ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next