Advertisement

ಉಡುಪಿ : ಛಿದ್ರಗೊಂಡಿರುವ ಶವ ಪತ್ತೆ : ಆತ್ಮಹತ್ಯೆ ಶಂಕೆ

01:58 PM Jun 07, 2021 | Team Udayavani |

ಉಡುಪಿ : ದೊಡ್ಡಣಗುಡ್ಡೆ ಮೂಡಸಗ್ರಿ ಸಮೀಪದ ರೈಲು ರಸ್ತೆಯಲ್ಲಿ ಅಪರಿಚಿತ ಗಂಡಸಿನ ಕಳೇಬರವು ಛಿದ್ರಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯು ಸೋಮವಾರ ನಡೆದಿದೆ. ರಾತ್ರಿ ಸಮಯ ಸಂಚರಿಸುವ ಗೂಡ್ಸ್ ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ.

Advertisement

ಮೃತ ಕಳೇಬರವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರು ಮಣಿಪಾಲ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಛಿದ್ರಗೊಂಡಿರುವ ಕಳೇಬರವನ್ನು ಒಟ್ಟುಗೂಡಿಸಿ ಶವಗಾರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು, ಜೀವನ್ ಇಂದ್ರಾಳಿ, ಸಿದ್ಧಾರ್ಥ ಬೈಲೂರು ಇಲಾಖೆಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next