Advertisement

Desi Swara: ರೈನ್‌ ಮೈನ್‌ ಕನ್ನಡ ಸಂಘ ;ಗಣೇಶ ಚತುರ್ಥಿ ಆಚರಣೆ

12:36 PM Sep 30, 2023 | Team Udayavani |

ಜರ್ಮನಿ:ಇಲ್ಲಿನ ರೈನ್‌ ಮೈನ್‌ ಕನ್ನಡ ಸಂಘವು ಪ್ರತೀ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಯನ್ನು ಆಚರಿಸಿತು. ಇದರೊಂದಿಗೆ ಸಂಘದ ನೂತನ ಕಾರ್ಯ ಹಾಗೂ ಸಹ ಕಾರ್ಯಕಾರಿ ಸಂಘದ ಸೇವಾವಧಿಯ ಆರಂಭಕ್ಕೆ ಮುನ್ನುಡಿ ಇಡಲಾಯಿತು.

Advertisement

ಜರ್ಮನಿಯಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದರಾದ ಅಜಿತ್‌ ಪ್ರಭು ಅವರು ಮಣ್ಣಿನಿಂದ ರಚಿಸಿದ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು, ಇದು ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ಆಗಮಿಸಿದ ಎಲ್ಲರೂ ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿದರು. ಮಹಿಳೆಯರು ಭಜನೆಯ ಮೂಲಕ ಸೇವೆ ನೀಡಿದರು. ಸುಮಾರು 300ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೂಷಿಕ ವಾಹನನ ಚಂದ್ರಯಾನದ ಫೋಟೋಬೂತ್‌ ಎಲ್ಲರನ್ನು ಆಕರ್ಷಿಸಿತು.

ಮಕ್ಕಳು ಸೇರಿದಂತೆ ಎಲ್ಲರಿಗೂ ವಿವಿಧ ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರವಂತಿ ಅನೂಪ್‌ ಹಾಗೂ ಜಯಂತ್‌ ಬದ್ರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

ಸುಮಾರು 40ಕ್ಕೂ ಹೆಚ್ಚಿನ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದರು. ತ್ರಿಜಗವಂದಿತನ ಪೂಜೆ ನಿರ್ವಿಘ್ನವಾಗಿ ನಡೆಸಿ ಎಲ್ಲರ ಸಮ್ಮುಖದಲ್ಲಿ ವಿಸರ್ಜನೆ ಮಾಡಲಾಯಿತು.

Advertisement

*ವರದಿ – ಶೋಭಾ ಚೌಹಾಣ್‌, ಫ್ರಾಂಕ್‌ಫ‌ರ್ಟ್‌

 

Advertisement

Udayavani is now on Telegram. Click here to join our channel and stay updated with the latest news.

Next