Advertisement

ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು: ದುಷ್ಕೃತ್ಯ ನಡೆಸಿರುವ ಶಂಕೆ

12:43 PM Apr 16, 2017 | |

ಹೊಸದಿಲ್ಲಿ/ಲಕ್ನೋ: ಉತ್ತರಪ್ರದೇಶದ ರಾಂಧಿಪುರದ ಸಮೀಪ ಮೀರತ್‌- ಲಕ್ನೋ ರಾಜ್ಯ ರಾಣಿ ಎಕ್ಸ್‌ಪ್ರಸ್‌ನ 8 ಬೋಗಿಗಳು ಶನಿವಾರ ಬೆಳಗ್ಗೆ ಹಳಿತಪ್ಪಿದ್ದು, ಕನಿಷ್ಠ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದೊಂದು ಉದ್ದೇಶಪೂರ್ವಕವಾಗಿ ನಡೆಸಲಾಗಿರುವ ಕೃತ್ಯವೆಂದು ಕಂಡು ಬಂದಿದೆ. ಅದಕ್ಕೆ ಪೂರಕವಾಗಿ ಮೂರು ಅಡಿಗಳಷ್ಟು ರೈಲ್ವೇ ಹಳಿ ಕಿತ್ತು ಹಾಕಲಾಗಿದೆ. ಮುಂದಾಪಾಂಡೆ ಮತ್ತು ರಾಂಪುರ ರೈಲು ನಿಲ್ದಾಣಗಳ ನಡುವೆ ಬೆಳಗ್ಗೆ 8.30ರ ವೇಳೆಗೆ ಈ ಘಟನೆ ನಡೆದಿದೆ. 

Advertisement

ಪರಿಹಾರ ಘೋಷಣೆ: ಗಂಭೀರವಾಗಿ ಗಾಯಗೊಂಡವರಿಗೆ ರೈಲ್ವೇ ಸಚಿವ ಸುರೇಶ್‌ ಪ್ರಭು ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ, ಅಲ್ಪ ಪ್ರಮಾಣದ ಗಾಯಗಳಾದವರಿಗೆ ಯೋಗಿ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಸಚಿವ ಪ್ರಭು ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next