Advertisement

ಡೆಂಗ್ಯೂ : ಸೊಳ್ಳೆ ಉತ್ಪಾದನೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

07:30 AM Jun 08, 2018 | |

ಕಾಸರಗೋಡು: ಚೆಂಗಳ, ಚೆಮ್ನಾಡ್‌ ಪಂಚಾಯತ್‌ಗಳಲ್ಲಿ ಜಿಲ್ಲಾಧಿಕಾರಿ ಜೀವನ್‌ಬಾಬು ತುರ್ತು ಸಭೆ ಕರೆದು ಡೆಂಗ್ಯೂ ಹರಡುವ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಪಂಚಾಯತ್‌ ಅಧ್ಯಕ್ಷರು, ವಾರ್ಡ್‌ ಸದಸ್ಯರು, ಪಂ. ಸೆಕ್ರೆಟರಿಗಳು, ಡಿ.ಎಂ.ಒ, ಡಿ.ಪಿ.ಎಂ, ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತರು, ಕ್ಲಬ್‌ ಅಧ್ಯಕ್ಷರು ಮೊದಲಾದವರು ಭಾಗವಹಿಸಿದರು.

Advertisement

ಸೊಳ್ಳೆ ನಾಶ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಮಾತ್ರವಲ್ಲ. ಪ್ರತಿಯೊಬ್ಬನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಹೇಳಿದರು. ಅದಕ್ಕಾಗಿ ಎಲ್ಲರೂ ಜತೆಯಾಗಿ ಸೊಳ್ಳೆ ನಾಶದಲ್ಲಿ ಮುಂದಾಗಬೇಕು. ವಾರ್ಡ್‌ ಮಟ್ಟದಲ್ಲಿ ಕ್ಲಸ್ಟರ್‌ಗಳನ್ನು ರಚಿಸಿ ಎಲ್ಲಾ ಮನೆಗಳಲ್ಲೂ, ವ್ಯಾಪಾರ ಸಂಸ್ಥೆಗಳನ್ನು ಸಂದರ್ಶಿಸಿ ಸೊಳ್ಳೆ ಉತ್ಪಾದನೆ ಕೇಂದ್ರಗಳನ್ನು ನಾಶಗೊಳಿಸಬೇಕು ಹಾಗೂ ಜಾಗೃತಿ ಮೂಡಿಸಬೇಕು ಎಂದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಕ್ಲಬ್‌ಗಳ ಸದಸ್ಯರು ಮೊದಲಾದವರನ್ನು ಒಗ್ಗೂಡಿಸಿ ಸೊಳ್ಳೆ ಉತ್ಪಾದನೆಯನ್ನು ನಿಯಂತ್ರಿಸಬೇಕೆಂದರು. ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಅರಿತುಕೊಂಡು ಜಾಗೃತರಾಗಬೇಕೆಂದರು.

ಡಿಸಿ ನೇತೃತ್ವದಲ್ಲಿ ಡಿಎಂಒ, ಡಿಪಿಎಂ, ಪಂ. ಅಧ್ಯಕ್ಷರು, ವಾರ್ಡ್‌ ಸದಸ್ಯರು ಮೊದಲಾದವರು ಚೆಂಗಳ ಪೇಟೆಯಲ್ಲಿರುವ ಮನೆಗಳಿಗೆ ಹಾಗೂ ವ್ಯಾಪಾರಿ ಸಂಸ್ಥೆಗಳಿಗೆ ಭೇಟಿ ನೀಡಿ ತ್ಯಾಜ್ಯ ರಾಶಿ ಬಗ್ಗೆ ಪರಿಶೀಲಿಸಿದರು. ಚೆಮ್ನಾಡ್‌ ಪಂಚಾಯತ್‌ನ ಕೈಗಾರಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ಲಾಸ್ಟಿಕ್‌ ರೀಸೈಕ್ಲಿಂಗ್‌ ಯೂನಿಟ್‌ನಲ್ಲಿ ರಾಶಿ ಹಾಕಲಾಗಿರುವ ವಸ್ತುಗಳನ್ನು ಶೀಘ್ರವೇ ತೆರವುಗೊಳಿಸಬೇಕೆಂದು ಆದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next