Advertisement

ಇಂದಿರಾ ಕ್ಯಾಂಟೀನ್‌ ತೆರೆಯಲು ಆಗ್ರಹ

07:29 AM Jan 31, 2019 | Team Udayavani |

ಹೊನ್ನಾಳಿ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಎನ್‌ಎಸ್‌ಯುಐ ಘಟಕ ಕಾರ್ಯಕರ್ತರು ಬುಧವಾರ ಟಿಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ತುಷಾರ ಬಿ. ಹೊಸೂರ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ತಾಲೂಕು ಎನ್‌ಎಸ್‌ಯುಐ ಘಟಕ ಅಧ್ಯಕ್ಷ ಮನೋಜ್‌, ಇಂದಿರಾ ಕ್ಯಾಂಟೀನ್‌ ಆರಂಭಿಸಿದರೆ ಗ್ರಾಮಾಂತರ ಪ್ರದೇಶದಿಂದ ಆಗಮಿಸುವ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ತಕ್ಷಣ ಇಂದಿರಾ ಕ್ಯಾಂಟೀನ್‌ ಸ್ಥ್ಫಾಪಿಸಬೇಕು ಎಂದರು.

ಈಗಗಾಲೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾಂಟೀನ್‌ಗೆ ಸ್ಥಳಾವಕಾಶ ನೀಡಿದ್ದು, ಹಿಂದಿನ ಜಿಲ್ಲಾಧಿಕಾರಿ ರಮೇಶ್‌ ಪರಿಶೀಲಿಸಿ ಸ್ಥಳ ನಿಗದಿ ಮಾಡಿದ್ದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ರಾಜಕೀಯ ದುರುದ್ದೇಶದಿಂದ ಅಲ್ಲಿ ಕ್ಯಾಂಟೀನ್‌ ಸ್ಥಾಪನೆಗೆ ಜಾಗ ನೀಡುವುದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದರು.

ದರ್ಶನ್‌ ಬಳ್ಳೇಶ್ವರ್‌, ರಾಜು ಕಣ್ಣಗಣ್ಣಾರ್‌ ಮಾತನಾಡಿದರು. ಪ್ರಕಾಶ್‌, ಶ್ರೀಧರ್‌ಗೌಡ, ಶ್ರೀಧರ್‌, ಬೀರಪ್ಪ, ಚೇತನ್‌, ಮೋಹನ್‌, ಅನಿಲ್‌, ಪ್ರಜ್ವಲ್‌, ಹರಿಶ್‌, ನಾಘರಾಜ್‌, ಹೇಮಂತ್‌, ಬಸುವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next