Advertisement

ಎಂಸಿಡಿಯಲ್ಲಿ ಮುಂದುವರಿದ ಆಪ್ ಮತ್ತು ಬಿಜೆಪಿ ಕದನ ; ಹೊಡೆದಾಟ

08:05 PM Feb 24, 2023 | Team Udayavani |

ನವದೆಹಲಿ : ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ರೋಚಕ ಕದನವು ಶುಕ್ರವಾರ ದೆಹಲಿ ಮಹಾನಗರಪಾಲಿಕೆಯಲ್ಲಿ ಗದ್ದಲಕ್ಕೆ ಕಾರಣವಾಗಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

Advertisement

ಸದನದಲ್ಲಿ ಇದು ಮೂರನೇ ದಿನವೂ ಗದ್ದಲ ನಡೆದಿದ್ದು, ಹೊಸದಾಗಿ ಆಯ್ಕೆಯಾದ ಮೇಯರ್ ಶೆಲ್ಲಿ ಒಬೆರಾಯ್ ಅವರು ಸ್ಥಾಯಿ ಸಮಿತಿ ಸದಸ್ಯರಿಗೆ ಮತಗಳನ್ನು ಮರು ಎಣಿಕೆ ಮಾಡಲು ಆದೇಶ ನೀಡಿದ ನಂತರ ಗದ್ದಲ ನಡೆಯಿತು. ಎಂಸಿಡಿಯ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಆಯ್ಕೆ ಮಾಡುವ ಮತದಾನ ಶುಕ್ರವಾರ ಮುಕ್ತಾಯಗೊಂಡ ನಂತರ, ಮೇಯರ್ ಅವರು ಅಸಿಂಧು ಎಂದು ಘೋಷಿಸಿದ ಒಂದು ಮತದ ಬಗ್ಗೆ ಕೌನ್ಸಿಲರ್‌ಗಳಲ್ಲಿ ಗಲಾಟೆ ಸ್ಫೋಟಗೊಂಡಿತು.

ಮೇಯರ್ ಒಂದು ಮತ ಅಸಿಂಧು ಎಂದು ಘೋಷಿಸಿದ್ದಕ್ಕೆ ಬಿಜೆಪಿ ಕೌನ್ಸಿಲರ್‌ಗಳು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಒಟ್ಟು 250 ಕೌನ್ಸಿಲರ್‌ಗಳಲ್ಲಿ 242 ಕೌನ್ಸಿಲರ್‌ಗಳು ಸಮಿತಿಯ ಸದಸ್ಯರಿಗೆ ಮತ ಚಲಾಯಿಸಿದರು. ಸ್ಥಾಯಿ ಸಮಿತಿ ಸದಸ್ಯರ ಮತದಾನ ಪ್ರಕ್ರಿಯೆಗೆ ಕಾಂಗ್ರೆಸ್ ಕೌನ್ಸಿಲರ್‌ಗಳು ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next