Advertisement

Delhi ಆಸ್ಪತ್ರೆಯಲ್ಲಿ ಬಲಿಯಾದದ್ದು ಅಮಾಯಕ ರೋಗಿ: ಗ್ಯಾಂಗ್ ಸ್ಟರ್ ನಿಜವಾದ ಗುರಿಯಾಗಿದ್ದ

09:26 PM Jul 15, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಗುರು ತೇಗ್ ಬಹದ್ದೂರ್ ಆಸ್ಪತ್ರೆಯೊಳಗೆ ಮಾರಣಾಂತಿಕ ಗುಂಡಿನ ದಾಳಿ ನಡೆಸಿ 32 ವರ್ಷದ ರೋಗಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಪ್ರಾಥಮಿಕ ತನಿಖೆಯ ನಂತರ ಆಸ್ಪತ್ರೆಯ ವಾರ್ಡ್ ಸಂಖ್ಯೆ 24 ರೊಳಗೆ ಹತ್ಯೆಗೀಡಾದ ರೋಗಿಯ ಮೇಲೆ ‘ಗುರಿ ತಪ್ಪಿ ‘ ದಾಳಿ ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ದಾಳಿಕೋರರು ಒಬ್ಬ ಗ್ಯಾಂಗ್ ಸ್ಟರ್  ನನ್ನು ಕೊಲ್ಲಲೆಂದು ಆಸ್ಪತ್ರೆಗೆ ಬಂದಿದ್ದು, ಹಸೀಂ ಬಾಬಾ ಗ್ಯಾಂಗ್‌ನ ಪ್ರತಿಸ್ಪರ್ಧಿಗಳು ಸ್ವಲ್ಪ ಸಮಯದವರೆಗೆ ಅದೇ ವಾರ್ಡ್‌ಗೆ ದಾಖಲಾಗಿ ಗುಂಡು ಹಾರಿಸಿದ್ದು, ಆದರೆ ಅವರು ಗುರಿ ತಪ್ಪಿ ಹಾಸಿಗೆಯ ಮೇಲೆ ಮಲಗಿದ್ದ ರಿಯಾಜುದ್ದೀನ್‌ಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳನ್ನು ಕ್ರಮವಾಗಿ ಉತ್ತರ ಪ್ರದೇಶ ಮತ್ತು ದೆಹಲಿಯ ಫೈಜ್ (20) ಮತ್ತು ಫರ್ಹಾನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಕಣ್ಗಾವಲು ನಾಲ್ವರು ಆರೋಪಿಗಳು ಆಸ್ಪತ್ರೆಗೆ ಪ್ರವೇಶಿಸುವುದನ್ನು ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆಯ ಮಾಸ್ಟರ್ ಮೈಂಡ್ ಫಹೀಂ ಅಲಿಯಾಸ್ ಬಾದ್ ಶಾ ಖಾನ್ ಮತ್ತು ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ 18 ವರ್ಷದ ಯುವಕ ಇನ್ನೂ ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next