Advertisement

ಶಬರಿಮಲೆ ಆದಾಯ ಕುಸಿತ

09:27 AM Jan 30, 2019 | Team Udayavani |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಆವರಣದಲ್ಲಿ ಹಾಲಿ ವರ್ಷ ನಡೆದ ಬೆಳವಣಿಗೆಗಳಿಂದ 98 ಕೋಟಿ ರೂ. ಆದಾಯ ಕಡಿಮೆಯಾಗಿದೆ. ಹೀಗಾಗಿ, ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು
ದೇವಸ್ವಂ ಮಂಡಳಿ (ಟಿಡಿಬಿ) ಕೇರಳ ಸರ್ಕಾರದಿಂದ 250 ಕೋಟಿ ರೂ. ನೆರವು ಕೇಳಿದೆ. ಶಬರಿಮಲೆ ವಿವಾದ ಕೇರಳದ ಇತರ ಪ್ರಮುಖ ದೇಗುಲಗಳ ಆದಾಯದ ಮೇಲೂ ಬರೆ ಎಳೆದಿದೆ.

Advertisement

ಜತೆಗೆ ರಾಜ್ಯಕ್ಕೆ ಅಪ್ಪಳಿಸಿದ ಪ್ರವಾಹದಿಂದಾಗಿ 50 ಕೋಟಿ ರೂ. ನಷ್ಟ ಉಂಟಾಗಿದೆ. ನಷ್ಟ ಮತ್ತು ಇತರ ಖರ್ಚು ನಿಭಾಯಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಮಂಡನೆಯಾಗುವ ಬಜೆಟ್‌ನಲ್ಲಿ 250 ಕೋಟಿ ರೂ.ಗಳ ನೆರವು ನೀಡುವಂತೆ
ಸರ್ಕಾರಕ್ಕೆ ಮನವಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next