Advertisement

ಕರ್ನಾಟಕ ರಾಜ್ಯೋತ್ಸವ ಸರಳ  ಆಚರಣೆಗೆ ನಿರ್ಧಾರ

03:02 PM Oct 25, 2019 | Suhan S |

ದೊಡ್ಡಬಳ್ಳಾಪುರ: ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಗಳ ಆಚರಣೆ ಸಮಿತಿ ವತಿಯಿಂದ ನ.1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಕುರಿತಂತೆ ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

Advertisement

ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ, ನೆರೆ ಸಂತ್ರ ಸ್ಥರಿಗೆನೆರವು ನೀಡುವುದು ಸೂಕ್ತ ಎಂದು ಕನ್ನಡ  ಪರ ಸಂಘಟನೆಗಳ ಮು ಖಂಡರು ಅಭಿಪ್ರಾಯಪಟ್ಟರು.

ವಾಲ್ಮೀಕಿ ಜಯಂತಿಯನ್ನೂ ಸರಳವಾಗಿ ಆಚರಿಸಲಾಗಿದೆ. ವಾಲ್ಮೀಕಿಜಯಂತಿಗೆ ಸರ್ಕಾರದಿಂದ ಮೀಸಲಿರಿಸಿದ ಅನುದಾನ ನೆರೆ ಸಂತ್ರಸ್ತರ ನಿಧಿಗೆ  ಬಳಕೆಯಾಗಿಲ್ಲ. ಸರಳವಾಗಿ ಆಚರಿಸಿದರೆ ಕಾರ್ಯಕ್ರಮದ ವೆಚ್ಚವನ್ನು ಸಂತ್ರಸ್ತರಿಗೆ ತಲುಪಸುವ ಕಾರ್ಯವಾಗ ಬೇಕು. ಕಾರ್ಯಕ್ರಮದ ಸನ್ಮಾನಿ ತರನ್ನು ಗೌ ರ ವ ಯು ತವಾಗಿ ನಡೆಸಿಕೊಳ್ಳಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಬೇಕು. ಇನ್ನು ಮುಂದೆ ವಾಣಿಜ್ಯ ಮಳಿಗೆ, ಸಾ ರ್ವಜನಿಕ ಫಲಕಗಳಲ್ಲಿ  ನಾಮಫಲಕ ಕಡ್ಡಾಯವಾಗಬೇಕು. ನಗರ ಸಭೆಯಲ್ಲಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು. ರಾಜ್ಯೋತ್ಸವದ ಸಂದ ರ್ಭದಲ್ಲಿ ಕನ್ನಡ  ಪರ ವಾತಾವರಣ ನಿರ್ಮಿಸುವ ನಿಯಮಗಳು ಜಾರಿ ಯಾಗಬೇಕು ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

ಪುರಭವನದಲ್ಲಿ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ, ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣದೊಂದಿಗೆ ನಾಡಪರಂಪರೆಯನ್ನು ಸಾರುವ ಮೆರವಣಿಗೆಗೆ ಚಾಲನೆ ನೀಡಬೇಕು ಎಂದು ಸಲಹೆ ನೀಡಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ವಾಲ್ಮೀಕಿ ಜಯಂತಿ ಆ ಚರಣೆ ಅನುದಾನವನ್ನು ನೆರೆ ಸಂತ್ರಸ್ತರಿಗೆ ತಲುಪಿಸುವ ಸಿದ್ಧತೆ ನಡೆದಿವೆ. ಒಟ್ಟಾರೆ ಎಲ್ಲಾ ಮೊ ತ್ತ ಕ್ರೋ ಢೀ ಕ ರಿಸಿ ನೀಡಲಾಗುವುದು. ಸಭೆಯಲ್ಲಿ ವ್ಯಕ್ತವಾಗಿರುವ ಅಭಿ

ಪ್ರಾಯಗಳನ್ನು ಮನ್ನಿಸಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುವುದು, ನಾಮಫಲಕ ಕಡ್ಡಾಯ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ತಹಶೀಲ್ದಾರ್‌ ಹಾಗೂ ರಾಷ್ಟ್ರೀಯ ಹಬ್ಬ ಗಳ ಆಚರಣೆ ಸಮಿತಿ ಅಧ್ಯಕ್ಷ ಟಿ. ಎ ಸ್‌.  ಶಿವರಾಜ್‌ ಮಾತನಾಡಿದರು. ತಾಪಂಅಧ್ಯಕ್ಷ ಡಿ.ಸಿ.ಶಶಿಧರ್‌, ಬಿಇಒ ಬೈಯಪ್ಪ ರೆಡ್ಡಿ, ನಗರಸಭೆ ವ್ಯವಸ್ಥಾಪಕ ಮುಮ್ತಾಜ್‌ಪಾಷಾ ಸೇ ರಿ ದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next