Advertisement

ಮೃಗಾಲಯದ ಚಿಂಪಾಂಜಿ ಉಸಿರಾಟ ಸಮಸ್ಯೆಯಿಂದ ಸಾವು

11:19 AM Dec 26, 2018 | Team Udayavani |

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿಂಪಾಂಜಿ 27 ವರ್ಷದ ಗುರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ. ಚೆನ್ನೈನ ಅರಿಗ್ನಾರ್‌ ಅಣ್ಣ ಮೃಗಾಲಯದಿಂದ 2003ರಲ್ಲಿ ಈ ಚಿಂಪಾಂಜಿಯನ್ನು ತರಿಸಲಾಗಿತ್ತು. 

Advertisement

ನಿಶ್ಯಕ್ತಿಯಿಂದ ಬಳಲುತ್ತಿದ್ದ ಈ ಚಿಂಪಾಂಜಿಗೆ ಮೃಗಾಲಯದ ಪಶು ವೈದ್ಯ ಡಾ.ಸುಂದರ್‌ರಾಜ್‌, ಸಲಹಾ ವೈದ್ಯರು ಮತ್ತು ಪ್ರೈಮೆಟ್ಸ್‌ಗಳನ್ನು ಸಂಪರ್ಕಿಸಿ ಚಿಕಿತ್ಸೆ ಮುಂದುವರಿಸಿದರಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ತಡರಾತ್ರಿ ಮೃತಪಟ್ಟಿದೆ.

ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ತಜ್ಞ ಪಶು ವೈದ್ಯರ ತಂಡ, ಪಶು ರೋಗ ನಿರ್ಣಯ ತಜ್ಞರು, ಪಶುಪಾಲನಾ ಇಲಾಖೆ ಮತ್ತು ಕೆ.ಆರ್‌.ಆಸ್ಪತ್ರೆ, ಗೋಪಾಲ ಗೌಡ ಆಸ್ಪತ್ರೆಯ ತಜ್ಞ ವೈದ್ಯರು ಚಿಂಪಾಂಜಿಯ ಮರಣೋತ್ತರ ಪರೀಕ್ಷೆ ನಡೆಸಿದರು.

ಮೃತ ಚಿಂಪಾಂಜಿಯ ವಿವಿಧ ಅಂಗಾಂಗಗಳ ಮಾದರಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ತಜ್ಞ ವೈದ್ಯರ ತಂಡ ಚಿಂಪಾಂಜಿಯು ಉಸಿರಾಟದ ವಿಫ‌ಲತೆಯಿಂದ ಮೃತಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next