Advertisement

ಮೋದಿ ಅಧಿಕಾರಕ್ಕೆ ಬಂದ ಬಳಿಕ 4 ಬಾರಿ ಮನೆ ಬದಲಿಸಿದ ದಾವೂದ್‌

04:16 PM Sep 21, 2017 | Team Udayavani |

ಮುಂಬಯಿ : ”1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಸೂತ್ರಧಾರನಾಗಿರುವ ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದಲ್ಲೇ ಇದ್ದಾನೆ; ನರೇಂದ್ರ ಮೋದಿ ಅವರ ಅಧಿಕಾರಕ್ಕೆ ಬಂದ ಬಳಿಕ ಆತ ಈ ವರೆಗೆ ಒಟ್ಟು ನಾಲ್ಕು ಬಾರಿ ಪಾಕಿಸ್ಥಾನದಲ್ಲಿ ತನ್ನ ವಾಸ್ತವ್ಯವನ್ನು ಬದಲಾಯಿಸಿದ್ದಾನೆ ಮತ್ತು ಅವನ ಭದ್ರತೆಯನ್ನು ಪಾಕ್‌ ಸರಕಾರ ಶೇ.50ರಷ್ಟು ಹೆಚ್ಚಿಸಿದೆ” ಎಂಬ ಮಹತ್ವದ ಸಂಗತಿಗಳನ್ನು ಈಚೆಗೆ ಸೆರೆಯಾಗಿರುವ ದಾವೂದ್‌ ಸಹೋದರ ಇಕ್ಬಾಲ್‌ ಕಸ್ಕರ್‌ ತನಿಖಾಧಿಕಾರಿಗಳಲ್ಲಿ ಹೇಳಿದ್ದಾನೆ.

Advertisement

ಸುಲಿಗೆ ಕೇಸುಗಳಿಗೆ ಸಂಬಂಧಿಸಿ ಕಳೆದ ಸೋಮವಾರ ಸೆರೆಯಾದ ಬಳಿಕ ಎಂಟು ದಿನಗಳ ಪೊಲೀಸ್‌ ಕಸ್ಟಡಿಯಲ್ಲಿರುವ ಕಸ್ಕರ್‌, ತನ್ನ ಸಹೋದರ ದಾವೂದ್‌ ಪಶ್ಚಿಮ ಮತ್ತು ಉತ್ತರ ಆಫ್ರಿಕ ದೇಶಗಳಲ್ಲಿ  ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಿದ್ದಾನೆ ಎಂದು ಬಾಯಿ ಬಿಟ್ಟಿದ್ದಾನೆ. 

ಭಾರತೀಯ ಭದ್ರತಾ ಸಂಸ್ಥೆಗಳು ತನ್ನ ಧ್ವನಿ ಮುದ್ರಣ ಮಾಡುವುದನ್ನು ತಪ್ಪಿಸಲು ದಾವೂದ್‌ ಕಳೆದ ಕೆಲ ಸಮಯದಿಂದ ತನ್ನ ಯಾವುದೇ ಸಂಬಂಧಿಕರೊಂದಿಗೆ ಫೋನಿನಲ್ಲಿ ಮಾತನಾಡುತ್ತಿಲ್ಲ ಎಂದು ಕಸ್ಕರ್‌ ಪೊಲೀಸ್‌ ಅಧಿಕಾರಿಗಳಿಗೆ ಹೇಳಿದ್ದಾನೆ. 

ಮುಂಬಯಿಯಲ್ಲಿ ಸುಲಿಗೆ ನಡೆಸಲು ಕಸ್ಕರ್‌, ದಾವೂದ್‌ನ ಸಹೋದರ ಅನೀಸ್‌ ಇಬ್ರಾಹಿಂ ಜತೆಗೂಡಿ ಕೆಲಸ ಮಾಡುತ್ತಿದ್ದ. ಅಮೆರಿಕದಿಂದ ಜಾಗತಿಕ ಉಗ್ರನೆಂದು ಘೋಷಿಸಲ್ಪಟ್ಟಿರುವ ದಾವೂದ್‌ ಇಬ್ರಾಹಿಂ, ದಕ್ಷಿಣ ಅಮೆರಿಕದ ಮಾದಕ ದ್ರವ್ಯ ದೊರೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕಸ್ಕರ್‌ ಹೇಳಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next