Advertisement

ದರ್ವೇಶ್‌ ಫಕೀರ್‌ ಅಲೆಮಾರಿ ಸಮುದಾಯಕ್ಕೆ ಸೌಲಭ್ಯ ನೀಡಿ

05:22 PM Jun 01, 2022 | Team Udayavani |

ರಾಯಚೂರು: ದರ್ವೇಶ್‌ ಫಕೀರ್‌ ಅಲೆಮಾರಿ ಸಮುದಾಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ದರ್ವೇಶ್‌ (ಫಕೀರ್‌) ಅಲೆಮಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ನಗರದ ಮುಖ್ಯ ರಸ್ತೆ ಮೂಲಕ ಡಿಸಿ ಕಚೇರಿಗೆ ಆಗಮಿಸಿದ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅನೇಕ ವರ್ಷಗಳಿಂದ ದರ್ವೇಶ ಅಲೆಮಾರಿ ಸಮುದಾಯಗಳು ಯಾವೊಂದು ಸೌಲಭ್ಯಗಳಿಲ್ಲದೇ ಕನಿಷ್ಟ ಜೀವನ ನಡೆಸುತ್ತಿವೆ. ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳಿಗೆ, ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಸಮಾಜಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.

ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಬೇಕು. ಖಾಲಿ ನಿವೇಶನಗಳ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು. ಸಾಲ ಸೌಲಭ್ಯಗಳನ್ನು ನೀಡಬೇಕು. ವಿಶೇಷ ವರ್ಗದ ಯೋಜನೆಯಡಿ ಜಮೀನು ಮಂಜೂರು ಮಾಡಬೇಕು. ಸಭೆ-ಸಮಾರಂಭಗಳಿಗಾಗಿ ಶಾದಿಮಹಲ್‌ಗ‌ಳನ್ನು ನಿರ್ಮಿಸಿಕೊಡಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್‌ ಹುಸೇನ್‌, ಸಮಾಜದ ಮುಖಂಡರಾದ ಮಹ್ಮದ್‌ ಅಲಿ ಮಟಮಾರಿ, ಅಮಾಲ್‌ ಸಾಬ್‌, ಮೌಲಾಸಾಬ್‌, ಮಹೆಬೂಬ್‌ ಸಾಬ್‌, ಫಯಾಜ್‌ ಅಲಿ, ಶಾಲಂ ಸಾಬ್‌, ಫಕ್ರುದ್ದೀನ್‌, ಎಂ.ಡಿ. ಅಲಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next