Advertisement

ದರ್ಶನ್‌-ಸುದೀಪ್‌ ಮನಸ್ತಾಪಕ್ಕೆ ಅಂಬರೀಶ್‌ ಎಂಟ್ರಿ ಇಲ್ಲ

11:34 AM Mar 14, 2017 | |

ಕನ್ನಡ ಚಿತ್ರರಂಗದ ಸ್ಟಾರ್‌ ನಟರಾಗಿರುವ ದರ್ಶನ್‌ ಹಾಗೂ ಸುದೀಪ್‌ ನಡುವಿನ ಮನಸ್ತಾಪವನ್ನು ಯಾರು ಬಗೆಹರಿಸುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ನಡುವೆಯೇ ಅಂಬರೀಶ್‌ ಅವರ ಹೆಸರು ಕೂಡಾ ಓಡಾಡತೊಡಗಿತ್ತು.

Advertisement

ಅಭಿಮಾನಿಯೊಬ್ಬರು ಈ ಪ್ರಶ್ನೆಯನ್ನು ನೇರವಾಗಿ ಸುಮಲತಾ ಅಂಬರೀಶ್‌ ಅವರಲ್ಲಿ ಟ್ವೀಟ್‌ ಮೂಲಕ ಕೇಳಿದ್ದಾರೆ. “ದರ್ಶನ್‌ ಹಾಗೂ ಸುದೀಪ್‌ ಅವರ ನಡುವಿನ ಮನಸ್ತಾಪವನ್ನು ಅಂಬರೀಶ್‌ ಅವರು ಬಗೆಹರಿಸಲಿ’ ಎಂಬಂತೆ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಸುಮಲತಾ ಅಂಬರೀಶ್‌ ಟ್ವೀಟರ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

“ಅವರಿಬ್ಬರು ತಿಳುವಳಿಕೆ ಇರುವ ನಟರು. ಸರಿ, ತಪ್ಪು ಯಾವುದು ಎಂಬುದನ್ನು ಅರಿಯುವ ಹಾಗೂ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಿಗಿದೆ. ಅವರ ನಿರ್ಧಾರವನ್ನು ನಾವು ಗೌರವಿಸಬೇಕಾಗುತ್ತದೆ’ ಎಂದು ಟ್ವೀಟ್‌ ಮಾಡುವ ಮೂಲಕ ಅಂಬರೀಶ್‌ ಈ ವಿಷಯದಲ್ಲಿ ಎಂಟ್ರಿಯಾಗುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next