Advertisement

ಸಿಎಂ ಎಚ್‌ಡಿಕೆಗೆ ಪರೋಕ್ಷ ಟಾಂಗ್‌ ನೀಡಿದ ನಟ ದರ್ಶನ್‌

08:59 AM Apr 28, 2019 | Team Udayavani |

ಬೆಂಗಳೂರು: ನಟ ದರ್ಶನ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದು, ರೈತರಿಗೆ ನ್ಯಾಯವಾದ ಬೆಲೆ ನೀಡಿದರೆ ಸಾಕು ಸಾಲ ಮನ್ನಾ ಮಾಡಬೇಕೆಂದಿಲ್ಲ ಎಂದಿದ್ದಾರೆ.

Advertisement

ಶನಿವಾರ ಬಿಐಟಿ ಕಾಲೇಜಿನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ದರ್ಶನ್‌ , ನಾವು ಇಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳಲು ಗಡಿಯಲ್ಲಿರುವ ಸೈನಿಕರು ಕಾರಣ ಎಂದರು.

ರೈತರು ದೇಶದ ಬೆನ್ನೆಲುಬು. ತುಂಬಾ ಕಡೆ ಹೇಳಬೇಕೆಂದಿದ್ದೆ, ಸಾಲ ಮನ್ನಾ , ಸಾಲಾಮನ್ನಾ ಎಂದು ಹೇಳುತ್ತಾರೆ. ರೈತರ ಸಾಲಮನ್ನಾ ಮಾಡಬೇಕೆಂದಿಲ್ಲ. ಅವರಿಗೆ ನ್ಯಾಯವಾದ ಬೆಲೆ ನೀಡಿದರೆ ಸಾಕು. ಅವರೆ ಸಾಲ ಕಟ್ಟುತ್ತಾರೆ ಎಂದರು. ಈ ವೇಳೆ ವಿದ್ಯಾರ್ಥಿಗಳು ಹೋ..ಎಂದು ಜೈ ಕಾರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next