Advertisement

ದರ್ಶನ್‌ ಪುಟ್ಟಣ್ಣಯ್ಯ ಸಂಚಲನ

12:37 PM Feb 27, 2023 | Team Udayavani |

ಮಂಡ್ಯ: ಕಳೆದ 2018ರ ಚುನಾವಣೆಯಲ್ಲಿ ಅನುಕಂಪದ ಅಲೆಯ ನಡುವೆಯೂ ಪರಾಭವಗೊಂಡು ಅಮೇರಿಕಾ ಸೇರಿದ್ದ ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಕ್ಷೇತ್ರಕ್ಕೆ ಆಗಮಿಸಿದ್ದು, ಪಾದಯಾತ್ರೆ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.

Advertisement

ಕಳೆದ 2022ರ ಡಿಸೆಂಬರ್‌ವರೆಗೂ ಇಡೀ ಕ್ಷೇತ್ರದಲ್ಲಿ ಜೆಡಿ ಎಸ್‌ಗೆ ಪ್ರಬಲ ಎದು ರಾಳಿಯೇ ಇರಲಿಲ್ಲ. ಈಗ, ದರ್ಶನ್‌ ಪುಟ್ಟಣ್ಣಯ್ಯ ಅಮೇರಿಕಾದಿಂದ ಕ್ಷೇತ್ರಕ್ಕೆ ಮರಳಿದ್ದು, ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡುತ್ತಿದ್ದಾರೆ.

ಅನುಕಂಪದ ಅಲೆಯಲ್ಲೂ ಸೋಲು: ಕಳೆದ 2018 ರ ಚುನಾ ವಣೆಯಲ್ಲಿ ತಂದೆ ಶಾಸಕ ಹಾಗೂ ರೈತ ನಾಯಕ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ಅನುಕಂಪದ ಅಲೆ ಇದ್ದರೂ ಜೆಡಿಎಸ್‌ ಶಾಸಕ ಸಿ.ಎಸ್‌. ಪುಟ್ಟರಾಜು ವಿರುದ್ಧ 22,224 ಮತ ಗಳಿಂದ ಪರಾಭವಗೊಂಡಿದ್ದರು. ಆಗಲೂ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಮೊದಲು ತಾಯಿ ಸುನೀತಾ ಪುಟ್ಟಣ್ಣಯ್ಯ ಸ್ಪರ್ಧಿಸುತ್ತಾರೆ ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಕೊನೇ ಕ್ಷಣದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅಖಾಡಕ್ಕೆ ಇಳಿದಿದ್ದರು. ಕ್ಷೇತ್ರದ ಜನ ಅನು ಕಂಪಕ್ಕೆ ಮಣೆ ಹಾಕಲಿಲ್ಲ. ಅನುಕಂಪದ ಅಲೆಯಲ್ಲಿ ಸೋತಿದ್ದು ಇದೇ ಮೊದಲು.

ವ್ಯವಹಾರ ತೊರೆದ ದರ್ಶನ್‌: ದರ್ಶನ್‌ ತನ್ನೆಲ್ಲಾ ವ್ಯವ ಹಾರಗಳು ಅಮೆರಿಕಾ ದಲ್ಲಿಯೇ ಇದ್ದರಿಂದ ಚುನಾ ವಣೆ ಸೋತ ಬಳಿಕ ಅಲ್ಲಿಯೇ ನೆಲೆಸಿದ್ದರು. ಆಗಾಗ್ಗೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದರು. ಕೆಲವು ರೈತ ಹೋರಾಟ, ಚಳ ವಳಿಯಲ್ಲಿ ಭಾಗವಹಿಸಿ ಬೆಂಬಲ ನೀಡುತ್ತಿದ್ದರು. ಇದೀಗ ಇಡೀ ವ್ಯವಹಾರವನ್ನೆಲ್ಲಾ ಮಾರಾಟ ಮಾಡಿ ಕ್ಷೇತ್ರದ ಜನರ ಸೇವೆ ಮಾಡಲು ಬಂದಿದ್ದೇನೆ. ಆದ್ದರಿಂದ ನನಗೆ ಆಶೀರ್ವಾದ ಮಾಡ ಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಜನಮನ ದರ್ಶನ: ಕಳೆದ 2022ರ ಡಿಸೆಂಬರ್‌ನಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ದರ್ಶನ್‌ಪುಟ್ಟಣ್ಣಯ್ಯ, ಫೆ.25 ರಿಂದ ಪಾದಯಾತ್ರೆ ಮೂಲಕ ಜನಮನ ದರ್ಶನ ಮಾಡಲು ಹೊರಟಿದ್ದಾರೆ. ಪಾದಯಾತ್ರೆ ಮಾಡುತ್ತಾ ಪ್ರತೀ ಗ್ರಾಮದ ಜನರ ಸಮಸ್ಯೆ ಆಲಿಸುತ್ತಾ, ರಾತ್ರಿ ಗ್ರಾಮ ದಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ.

Advertisement

ಜನರಿಂದ ಅದ್ದೂರಿ ಸ್ವಾಗತ: ಮಂಡ್ಯ ತಾಲೂಕಿನ ಮೇಲುಕೋಟೆ ಕ್ಷೇತ್ರದ ಎಚ್‌.ಮಲ್ಲಿಗೆರೆ ಗ್ರಾಮದಿಂದ ಪಾದಯಾತ್ರೆ ಆರಂಭಿಸಿರುವ ದರ್ಶನ್‌ ರಿಗೆ ಕ್ಷೇತ್ರದ ಗ್ರಾಮಸ್ಥರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ. ಹೋದ ಕಡೆಯಲೆಲ್ಲಾ, ವಿವಿಧ ರೀತಿಯ ಬೃಹತ್‌ ಹಾರ ಹಾಕುತ್ತಾ ಬೆಂಬಲ ಸೂಚಿಸುತ್ತಿದ್ದಾರೆ.

ಪ್ರಬಲವಾಗಿರುವ ರೈತಸಂಘ: ಮೇಲುಕೋಟೆ ಕ್ಷೇತ್ರ ದಲ್ಲಿ ರೈತ ನಾಯಕ ಕೆ.ಎಸ್‌. ಪುಟ್ಟಣ್ಣಯ್ಯ ಅವರ ಸಂಘ ಟನೆಯಿಂದ ಇಂದಿಗೂ ರೈತಸಂಘ ಪ್ರಬಲವಾಗಿ ಬೇರೂ ರಿದೆ. 1989ರ ಚುನಾವಣೆಯಲ್ಲಿ ರೈತಸಂಘ ದಿಂದ ಕೆ. ಎಸ್‌.ಪುಟ್ಟಣ್ಣಯ್ಯ ಕಣಕ್ಕಿಳಿ ದಿದ್ದರು. ಇಂದಿಗೂ ಕ್ಷೇತ್ರದಲ್ಲಿ ರೈತಸಂಘ ತನ್ನದೇ ಆದ ಮತ ಬ್ಯಾಂಕ್‌ ಹೊಂದಿದೆ.

ಕಾಂಗ್ರೆಸ್‌ ಬೆಂಬಲ: ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತಿದೆ. ಕಳೆದ 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿ ಹಾಕದೆ ರೈತಸಂಘದ ಅಭ್ಯರ್ಥಿ ದರ್ಶನ್‌ಪುಟ್ಟಣ್ಣಯ್ಯಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಬಾರಿಯೂ ಕಾಂಗ್ರೆಸ್‌ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳು ರೈತಸಂಘದೊಂದಿಗೆ ಹೊಂದಾಣಿಕೆ ಬೇಡ. ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೂ, ಈ ಬಾರಿ ಹೊಂದಾಣಿಕೆ ಯಾಗುವ ಸಾಧ್ಯತೆಗಳೇ ಹೆಚ್ಚಿವೆ.

ನಟ ದರ್ಶನ್‌ ಸ್ಟಾರ್‌ ಕ್ಯಾಂಪೇನರ್‌ : ದರ್ಶನ್‌ಪುಟ್ಟಣ್ಣಯ್ಯ ಪರ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಬಾರಿ ಸ್ಟಾರ್‌ ಕ್ಯಾಂಪೇನರ್‌ ಆಗಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರೈತಸಂಘ ಸಂಪೂರ್ಣ ಸುಮಲತಾ ಪರ ನಿಂತಿತ್ತು. ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ ನಲ್ಲಿ ನಡೆದ ಸಮಾವೇಶದಲ್ಲಿ ಸ್ವತಃ ನಟ ದರ್ಶನ್‌ ಮುಂದಿನ ಚುನಾವಣೆಯಲ್ಲಿ ದರ್ಶನ್‌ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಲಿದ್ದೇನೆ. ಆತ ನನ್ನ ಸಹೋದರ ಇದ್ದಂತೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಇತ್ತೀಚೆಗೆ ನಟ ದರ್ಶನ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್‌ಪುಟ್ಟಣ್ಣಯ್ಯ ಖುದ್ದು ಭೇಟಿ ಮಾಡಿ ಶುಭಾಷಯ ಕೋರಿದ್ದಲ್ಲದೆ, ಕಾಟೇರ ಸಿನಿಮಾ ಪೋಸ್ಟರ್‌ ಬಿಡುಗಡೆ ಮಾಡಿ ಬಂದಿದ್ದರು. ಇದರಿಂದ ದರ್ಶನ್‌ ಪುಟ್ಟಣ್ಣಯ್ಯ ಪರ ಚುನಾವಣೆಯಲ್ಲಿ ನಟ ದರ್ಶನ್‌ ಪ್ರಚಾರ ಮಾಡಲಿದ್ದಾರೆ.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next