Advertisement

Actor Darshan: ವಿಚಾರಣೆಗೆ ಹಾಜರಾದ ದರ್ಶನ್‌

11:44 AM Nov 16, 2023 | Team Udayavani |

ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ಬುಧವಾರ ನಟ ದರ್ಶನ್‌ ರಾಜರಾಜೇಶ್ವರಿನಗರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಠಾಣೆಗೆ ಆಗಮಿಸಿದ ನಟ ದರ್ಶನ್‌ ಅವರನ್ನು ಸುಮಾರು 20 ನಿಮಿಷಗಳ ಠಾಣಾಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

Advertisement

ಈ ವೇಳೆ ‘ನಮ್ಮ ಮನೆಯ ಸಹಾಯಕನಿಗೆ ಸೂಕ್ತ ತಿಳಿವಳಿಕೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರದಿಂದ ಇರುವಂತೆ ಸೂಚಿಸಿದ್ದೇನೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಗೆ ವಿಷಾದ ವ್ಯಕ್ತಪಡಿಸುವೆ.’ ಎಂದು ನಟ ದರ್ಶನ್‌ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅ.28ರಂದು ದರ್ಶನ್‌ ಮನೆಯ ಸಾಕು ನಾಯಿ, ಬಿಇಎಂಎಲ್‌ 5ನೇ ಹಂತದ ನಿವಾಸಿಯಾದ ಅಮಿತಾ ಜಿಂದಾಲ್‌ ಅವರಿಗೆ ಕಚ್ಚಿತ್ತು. ಘಟನೆ ಸಂಬಂಧ ಅಮಿತಾ ದೂರು ನೀಡಿದ ಮೇರೆಗೆ ರಾಜರಾಜೇಶ್ವರನಗರ ಠಾಣೆ ಪೊಲೀಸರು ನಟ ದರ್ಶನ್‌ ಹಾಗೂ ಇತರರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಖುದ್ದು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದರು. ದೂರುದಾರೆ ಅಮಿತಾ ಜಿಂದಾಲ್‌ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ಬಳಿಕ ನಟ ದರ್ಶನ್‌ ಮನೆಯ ಸಹಾಯಕ ಹೇಮಂತ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಬಳಿಕ ದರ್ಶನ್‌ಗೂ ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಠಾಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next